ಜುಲೈ 1 ರಿಂದ ಈ 5 ರಾಶಿಯವರಿಗೆ ಮಂಜುನಾಥಸ್ವಾಮಿ ಕೃಪೆಯಿಂದ ರಾಜಯೋಗ ,ಶುಕ್ರದೆಸೆ!

0 39

ಇಂದು 1 ಜುಲೈ ಮಧ್ಯರಾತ್ರಿಯಿಂದಲೇ ಈ 5 ರಾಶಿಯವರು ಆದಷ್ಟು ಬೇಗ ಶ್ರೀಮಂತರಾಗುತ್ತಾರೆ ,ಇವರ ಆರೋಗ್ಯವು ವೃದ್ಧಿಯಾಗುತ್ತದೆ ಹಾಗೂ ಬಹಳ ದೊಡ್ಡ ಕಂಟಕದಿಂದ ಪಾರಾಗುತ್ತಾರೆ.ಇನ್ನು ಶ್ರೀಮಂತರಾಗುತ್ತಿರುವ ಆ 5 ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ..

ಜನರು ಹೆಚ್ಚು ನಂಬುವ ಮತ್ತು ಪೂಜಿಸುವ ದೇವರಲ್ಲಿ ಅಗ್ರಸ್ಥಾನದಲ್ಲಿರುವುದು ಶ್ರೀ ಮಂಜುನಾಥ ಸ್ವಾಮಿ.ಶ್ರೀ ಮಂಜುನಾಥ ಸ್ವಾಮಿಯು ತನ್ನನ್ನು ನಂಬಿದ ಭಕ್ತರನ್ನು ಯಾವತ್ತು ಕೂಡ ಕೈಬಿಡುವುದಿಲ್ಲ ಮತ್ತು ಒಮ್ಮೆ ಶ್ರೀ ಮಂಜುನಾಥನನ್ನು ನೆನೆದು ಮನಸ್ಸಿನಲ್ಲಿ ಪ್ರಾರ್ಥಿಸಿದರೆ ನಮಗೆ ಇರುವಂತಹ ಸಕಲ ಕಷ್ಟಗಳು ದೂರಾಗುತ್ತದೆ.ಇನ್ನು ಶ್ರೀ ಮಂಜುನಾಥ ಸ್ವಾಮಿಯ ದೃಷ್ಟಿ ನೇರವಾಗಿ ಈ 5 ರಾಶಿಯವರ ಮೇಲೆ ಆಶೀರ್ವಾದವಾಗಿ ಬೀಳಲಿದೆ.ಈ 5 ರಾಶಿಯಲ್ಲಿ ಇದ್ದ ಎಲ್ಲ ದೋಷಗಳು ನಿವಾರಣೆಯಾಗಿ ಅವರ ಜೀವನದ ತೊಂದರೆಗಳು ಬಗೆಹರಿಯುತ್ತವೆ.

ಇನ್ನು ಆ 5 ರಾಶಿಗಳು ಯಾವೆಂದರೆ

  • ಮೇಷರಾಶಿ

ಈ ರಾಶಿಯವರು ಮಾಡುವ ಕೆಲಸ ಮತ್ತು ವ್ಯವಹಾರದಲ್ಲಿ ಒಳ್ಳೆಯ ಲಾಭ ಸಿಗುತ್ತದೆ. ಇವರ ಆರ್ಥಿಕ ಪರಿಸ್ಥಿತಿ ನಿಧಾನಗತಿಯಲ್ಲಿ ಸಾಗುತ್ತದೆ.ಇನ್ನು ಮುಂದೆ ಇವರು ಆರೋಗ್ಯವಾದ ವಿಚಾರವಾಗಿ ಹುಷಾರಾಗಿರಬೇಕು.ಇವರ ಮುಂದಿನ ಜೀವನದ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಲು ಪ್ರತಿನಿತ್ಯ ಗಣೇಶನ ಪ್ರಾರ್ಥನೆ ಮಾಡುವುದು ಒಳ್ಳೆಯದು.

  • ಕುಂಭ ರಾಶಿ

ಇನ್ನು ಈ ರಾಶಿಯವರು ಈಗಿನ ಕೊರೊನಾ ಸಮಯದಲ್ಲಿ ಮನೆಯಲ್ಲಿ ಇರುವುದು ಒಳ್ಳೆಯದು ಹಾಗೂ ಒಂದು ವೇಳೆ ಹೊರಗಡೆ ಹೋಗಬೇಕಾದ ಪಕ್ಷದಲ್ಲಿ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸುವುದು ತುಂಬಾ ಮುಖ್ಯ.ಇನ್ನು ಆರ್ಥಿಕ ಸಮಸ್ಯೆಗಳು ನಿವಾರಣೆ ಆಗಲಿದ್ದು , ಶ್ರೀ ಮಂಜುನಾಥನ ಕೃಪೆಯಿಂದ ಇವರಿಗೆ ಇರುವ ಹಣದ ಸಮಸ್ಯೆಗಳು ನಿವಾರಣೆಯಾಗುತ್ತದೆ.ಹೂಡಿಕೆ ಮಾಡಲು ಇದು ಒಳ್ಳೆಯ ಸಮಯವಾಗಿರುತ್ತದೆ.

  • ಮಿಥುನ ರಾಶಿ

ಈ ರಾಶಿಯವರನ್ನು ಹೆಚ್ಚಿನ ಜನರು ಅಪಾರ್ಥ ಮಾಡಿಕೊಳ್ಳುತ್ತಾರೆ ಆದ್ದರಿಂದ ಇವರು ಎಚ್ಚರಿಕೆಯಿಂದ ಮುಂದುವರಿಯತಕ್ಕದ್ದು.ಇನ್ನು ಇವರ ಕನಸುಗಳನ್ನು ನನಸು ಮಾಡಿಕೊಳ್ಳಲು ಇದು ಒಳ್ಳೆಯ ಸಮಯವಾಗಿದ್ದು ,ಇವರು ಮಾಡುವ ಕೆಲಸದಲ್ಲಿ ಜಯ ದೊರೆಯಲಿದೆ.ಇನ್ನು ಮದುವೆಗೆ ,ಸಂತಾನ ಪ್ರಾಪ್ತಿಗೆ ಒಳ್ಳೆಯ ಸಮಯ ಮತ್ತು ಶುಭ ಕೆಲಸ ಆರಂಭಿಸಲು ಇದು ಒಳ್ಳೆಯ ಸಮಯವಾಗಿದೆ.

ಕಟಕ ರಾಶಿ

ಈ ರಾಶಿಯವರು ಮಿಶ್ರಫಲವನ್ನು ಪಡೆಯುತ್ತಾರೆ.ಇವರು ಮಾಡುವ ವ್ಯವಹಾರದಲ್ಲಿ ತಕ್ಕಮಟ್ಟಿನ ಲಾಭ ಪಡೆಯುತ್ತಾರೆ
ಆದರೆ ನಿರಾಸೆ ಪಡುವ ಅಗತ್ಯವಿಲ್ಲ.ದುಂದುವೆಚ್ಚವನ್ನು ಸ್ವಲ್ಪ ಕಡಿಮೆ ಮಾಡಿ ಮತ್ತು ಹಣವನ್ನು ಇಂದಿನಿಂದಲೇ ಕೂಡಿಡುವುದು ಒಳ್ಳೆಯದು ಏಕೆಂದರೆ ಮುಂದೆ ನಿಮಗೆ ಅದು ಬಹಳ ಉಪಯುಕ್ತ ಕಾರ್ಯಕ್ಕೆ ಬೇಕಾಗುತ್ತದೆ.ಶ್ರೀ ಮಂಜುನಾಥನ ಆಶೀರ್ವಾದ ಸಮರ್ಪಕವಾಗಿ ಸಿಗುತ್ತದೆ.ಇವರ ಕುಟುಂಬದಲ್ಲಿ ಸುಖ ಸಂತೋಷ ವೃದ್ಧಿಸುತ್ತದೆ ಮತ್ತು ಮಕ್ಕಳಾಗದವಗೆ ಸಂತಾನ ಭಾಗ್ಯ ಕೂಡಿಬರಲಿದೆ.

ಸಿಂಹ ರಾಶಿ

ಈ ರಾಶಿಯವರು ವ್ಯಾಪಾರ ವ್ಯವಹಾರದ ಕಡೆ ಹೆಚ್ಚಿನ ಗಮನ ನೀಡುವುದು ಒಳ್ಳೆಯದು.ಈ ರಾಶಿಯವರಿಗೆ ಶ್ರೀಮಂಜುನಾಥನ ಕೃಪೆಯಿಂದ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿಯಾಗಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಕಾಲ ಬಂದಿರುವುದರಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುತ್ತಾರೆ.

ಈ ರಾಶಿಯಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ”ಓಂ ಶ್ರೀ ಮಂಜುನಾಥಾಯ ನಮಃ” ಎಂದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.

Leave A Reply

Your email address will not be published.