ಕರ್ಪೂರವನ್ನು ಆರೋಗ್ಯದ ಸಮಸ್ಯೆಗೆ ಬಳಸಿ ಶಾಶ್ವತವಾಗಿ ಈ ಸಮಸ್ಸೆ ದೂರವಾಗುತ್ತದೆ!

0 4,705

ವಾಸ್ತವವಾಗಿ ಕರ್ಪೂರವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಇದರಲ್ಲಿ ಹಲವಾರು ಔಷಧೀಯ ಗುಣಗಳಿಂದು ದೇಹ ಮತ್ತು ಮನಸ್ಸು ಎರಡನ್ನು ಸದೃಢವಾಗಿ ಇಡಲು ಸಹಕಾರಿಯಾಗಿದೆ. ಪೂಜೆಯ ಸಮಯದಲ್ಲಿ ಕರ್ಪೂರವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಕರ್ಪೂರವು ಮನೆಯ ವಾಸ್ತು ದೋಷಗಳನ್ನು ಮತ್ತು ನಕಾರಾತ್ಮಕತೆಯನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ಕರ್ಪೂರವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ. ಆದರೆ ನಿಮ್ಮ ಎಲ್ಲ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸುವ ಇಂತಹ ಹಲವು ಗುಣಗಳನ್ನು ಕರ್ಪೂರ ಹೊಂದಿದೆ.

ಕರ್ಪೂರದ ಪರಿಮಳ ಮನಸ್ಸಿಗೆ ಮುದ ನೀಡುತ್ತದೆ.ನೀವು ಹೆಚ್ಚು ಒತ್ತಡವನ್ನು ಹೊಂದಿದರೆ ಕರ್ಪೂರವನ್ನು ಒಂದು ಪಾತ್ರೆಯಲ್ಲಿ ಹಾಕಿ ನಿಮ್ಮ ಕೋಣೆಯಲ್ಲಿ ಇಟ್ಟುಕೊಳ್ಳಬೇಕು. ಇದು ಒತ್ತಡವನ್ನು ನಿವಾರಿಸುತ್ತದೆ ಮತ್ತು ರಾತ್ರಿ ಚೆನ್ನಾಗಿ ನಿದ್ದೆ ಬರುವಂತೆ ಮಾಡುತ್ತದೆ.

ಇನ್ನು ತಲೆನೋವಿನ ಸಂದರ್ಭದಲ್ಲಿ ಕರ್ಪೂರ ಶುಂಠಿ ಮತ್ತು ಬಿಳಿ ಚಂದನವನ್ನು ಸಮಪ್ರಮಾಣದಲ್ಲಿ ಅರೆದು ಹಣೆಗೆ ಲೆಪಿಸಬೇಕು. ಸ್ವಲ್ಪ ಸಮಯದವರೆಗೆ ಅದನ್ನು ಹಾಗೆ ಬಿಟ್ಟು ಮಲಗಿ. ಇದರಿಂದ ಸಾಕಷ್ಟು ವಿಶ್ರಾಂತಿ ಪಡೆಯುತ್ತೀರಿ.

ಇನ್ನು ಸ್ನಾಯು ಮತ್ತು ಕೆಮ್ಮನ್ನು ಕರ್ಪೂರ ನಿವಾರಿಸುತ್ತದೆ. ಸ್ನಾಯು ನೋವನ್ನು ನಿವಾರಿಸಲು ಕರ್ಪೂರವನ್ನು ಸಹಾಯಕವೆಂದು ಪರಿಗಣಿಸಲಾಗಿದೆ. ಇದಕ್ಕಾಗಿ ಸಾಸಿವೆ ಎಣ್ಣೆಯಲ್ಲಿ ಕರ್ಪುರವನ್ನು ಹಾಕಿ ನಿತ್ಯವೂ ದೇಹಕ್ಕೆ ಮಸಾಜ್ ಮಾಡಬೇಕು. ಇದರಿಂದ ನಿಮಗೆ ಸಾಕಷ್ಟು ವಿಶ್ರಾಂತಿ ಸಿಗುತ್ತದೆ.

ಇನ್ನು ಬಿಸಿನೀರಿನಲ್ಲಿ ಕರ್ಪೂರವನ್ನು ಹಾಕಿ ಹಬೆ ತೆಗೆದುಕೊಳ್ಳುವುದು ಕೂಡ ಶೀತದ ಸಂದರ್ಭದಲ್ಲಿ ಉತ್ತಮ ಪರಿಹಾರವನ್ನು ನೀಡುತ್ತದೆ. ನಿಮ್ಮ ತ್ವಚೆಯಲ್ಲಿ ಸಾಕಷ್ಟು ಕಲೆಗಳು ಇದ್ದರೆ ತೆಂಗಿನ ಎಣ್ಣೆಯಲ್ಲಿ ಕರ್ಪೂರವನ್ನು ಬೆರೆಸಿ ನಿಯಮಿತವಾಗಿ ತ್ವಚೆಗೆ ಹಚ್ಚಬೇಕು. ಇದರಿಂದ ಕಲೆ ನಿವಾರಣೆಯಾಗಿ ಚರ್ಮ ಸ್ವಚ್ಛವಾಗುತ್ತದೆ ಮತ್ತು ಇದನ್ನು ತಲೆಗೆ ಹಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

Leave A Reply

Your email address will not be published.