ನಿಮ್ಮ ಮನೆಯ ಹತ್ತಿರ ಈ ಗಿಡಗಳು ಇದ್ದರೆ ಮನೆಯಲ್ಲಿ ಜಗಳಗಳು ಕಷ್ಟಗಳೇ ಶೀಘ್ರವೇ ಗಿಡಗಳನ್ನು ತೆಗೆದುಹಾಕಿ!

ವಾಸ್ತುವಿನ ಪ್ರಕಾರ ಮನೆಯ ಅಂಗಳದಲ್ಲಿ ಕೆಲವು ಬಗೆಯ ಸಸಿಗಳನ್ನು ಕೆಲವು ಬಗೆಯ ಗಿಡಗಳನ್ನು ಇಟ್ಟುಕೊಳ್ಳುವುದರಿಂದ ಸಾಕಷ್ಟು ಅದೃಷ್ಟ ಉಂಟಾಗುತ್ತದೆ ಹಾಗೂ ಕೆಲವೊಂದು ಗಿಡವನ್ನು ಇಟ್ಟುಕೊಳ್ಳುವುದರಿಂದ ದುರದೃಷ್ಟ ಉಂಟಾಗುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳುತ್ತಾರೆ.

ಯಾವುದೇ ಜಾತಿಯ ಮುಳ್ಳು ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.ಈ ರೀತಿ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಕಲಹಗಳು ಉಂಟಾಗುತ್ತವೆ.

ಇನ್ನು ಗುಲಾಬಿ ಗಿಡವನ್ನು ಮನೆಯಲ್ಲಿ ಬೆಳೆಸಿಕೊಳ್ಳಬಹುದು. ಕೆಂಪು ಬಣ್ಣ ಆಗುವ ಯಾವುದೇ ಗಿಡಗಳನ್ನು ಮನೆಯ ಒಳಗಡೆ ಇಟ್ಟುಕೊಂಡು ಬೆಳೆಸಬಾರದು.

ಇದರಿಂದ ಮನೆಗೆ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ. ಆದ್ದರಿಂದ ಈ ಕೆಂಪು ಬಣ್ಣದ ಹೂವುಗಳನ್ನು ಮನೆಯ ಆವರಣದಲ್ಲಿ ಇಟ್ಟುಕೊಳ್ಳಬಹುದು.ಇನ್ನು ಬಾಡಿಹೋದ ಗಿಡಗಳನ್ನು ಆದಷ್ಟು ಬೇಗನೇ ಸ್ವಚ್ಛಗೊಳಿಸಬೇಕು.

ಇನ್ನು ಮನೆಯ ಉತ್ತರ ದಿಕ್ಕಿಗೆ ತುಳಸಿ ಗಿಡವನ್ನು ಇಟ್ಟುಕೊಳ್ಳಬಹುದು. ಮುಖ್ಯವಾಗಿ ಗೊರಂಟಿ ಗಿಡ ಹಾಗೂ ಹುಣಸೆ ಕಾಯಿ ಗಿಡಗಳನ್ನು ಸಾಧ್ಯವಾದಷ್ಟು ಮನೆಯ ಆವರಣಕ್ಕಿಂತ ದೂರದಲ್ಲಿ ನೆಡಬೇಕು.ಆ ಗಿಡಗಳಲ್ಲಿ ನಕಾರಾತ್ಮಕ ಪ್ರೇತಗಳು ವಾಸವಾಗಿರುತ್ತದೆ. ಆದ್ದರಿಂದ ದೂರ ನೆಡುವುದು ಒಳ್ಳೆಯದು.

ಇನ್ನು ಬೇವಿನ ಮರವು ಕೂಡ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬಾರದು. ಯಾವುದೇ ಗಿಡವಾಗಲಿ ಶುಭ್ರವಾಗಿ ಹಸಿರಿನಿಂದ ಕೂಡಿರಬೇಕು. ಮುಖ್ಯವಾಗಿ ಮನಿಪ್ಲಾಂಟ್ ಮತ್ತು ತುಳಸಿ ಗಿಡವನ್ನು ಮನೆಯ ಎದುರುಗಡೆ ಇರುವಂತೆ ನೋಡಿಕೊಳ್ಳಬೇಕು.ಹಾಗೆಯೇ ಮನೆಯ ಅಂಗಳದ ಉತ್ತರ ದಿಕ್ಕಿಗೆ ಅಥವಾ ಗೋಡೆಯಮೇಲೆ ಗಿಡಗಳನ್ನು ಇಡಬಾರದು.

Related Post

Leave a Comment