50 ಕಾಯಿಲೆಗಳಿಗೆ ಒಂದೇ ಮನೆಮದ್ದು ನವಣೆ ಸಿರಿಧಾನ್ಯ!

ಹಿಂದಿನ ಕಾಲದಲ್ಲಿ ಹೇರಳವಾಗಿ ಎಲ್ಲಾ ಕಡೆ ಲಭ್ಯವಿದ್ದ ಮತ್ತು ಎಲ್ಲಾ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಬಳಸುತ್ತಿದ್ದ ಸಿರಿ ಧಾನ್ಯಗಳು ಇಂದು ಹುಡುಕಿದರೂ ನಮ್ಮ ಕಣ್ಣಿಗೆ ಕಾಣುತ್ತಿಲ್ಲ.ಕರ್ನಾಟಕದಲ್ಲಿ ವರ್ಷಕ್ಕೊಮ್ಮೆ ಯಾವುದೋ ಒಂದು ನಿರ್ದಿಷ್ಟ ಸ್ಥಳದಲ್ಲಿ ನಡೆಯುವ ‘ ಸಿರಿ ಧಾನ್ಯಗಳ ಜಾತ್ರೆ ‘ ಎಂಬ ವಿಶೇಷ ಸಂದರ್ಭದಲ್ಲಿ ಮಾತ್ರ ಅವುಗಳನ್ನು ನೋಡುತ್ತಿದ್ದೇವೆ.ಅದು ಬಿಟ್ಟರೆ, ನಮ್ಮ ದಿನ ನಿತ್ಯದ ಆಹಾರ ಪದಾರ್ಥಗಳು ನಮಗೆ ಸುಲಭವಾಗಿ ಸಿಗುವ ಹಾಗೆ ಸಿರಿ ಧಾನ್ಯಗಳಾದ ಸಾಮೆ, ಸಜ್ಜೆ, ನವಣೆ, ಆರ್ಕ ಇತ್ಯಾದಿಗಳು ಲಭ್ಯವಿಲ್ಲ. ಹೀಗಾಗಿ ಜನರಿಗೆ ಇವುಗಳ ಅರಿವು ಕೂಡ ಕಡಿಮೆ.

ಸಿರಿಧಾನ್ಯಗಳ ಆರೋಗ್ಯ ಪ್ರಯೋಜನಗಳು-ಇನ್ನು ಇವುಗಳ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ ನಮಗೆ ಗೊತ್ತೇ ಇಲ್ಲ ಎಂದು ಹೇಳುತ್ತಾರೆ. ಮನೆಯಲ್ಲಿ ಒಂದು ವೇಳೆ ಯಾರಾದರೂ ಹಿರಿಯರಿದ್ದರೆ, ಬಹುಷಃ ಅವರಿಗೆ ಇವುಗಳ ಬಳಕೆ ಮತ್ತು ಆರೋಗ್ಯಕ್ಕೆ ಸಂಬಂಧ ಪಟ್ಟ ಲಾಭಗಳ ಬಗ್ಗೆ ತಿಳಿದಿರಬಹುದು ಅಷ್ಟೇ.

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇಂದು ತಮ್ಮ ಜೀವನ ಶೈಲಿಯನ್ನು ತಾವೇ ಅದಲು ಬದಲು ಮಾಡಿಕೊಂಡು ಬದುಕುತ್ತಿರುವ ಜನರು ಹಲವಾರು ರೋಗ – ರುಜಿನಗಳಿಗೆ ಬೇಕೆಂದೇ ಆಹ್ವಾನ ಕೊಡುತ್ತಿದ್ದಾರೆ.ಹಾಗಾಗಿ ಇಂದಿನ ಸಂದರ್ಭದಲ್ಲಿ ಅಚ್ಚುಕಟ್ಟಾದ ಆರೋಗ್ಯ ನಿರ್ವಹಣೆಗೆ ಸಿರಿ ಧಾನ್ಯಗಳು ತುಂಬಾ ಅವಶ್ಯಕ. ಈ ಲೇಖನದಲ್ಲಿ ಸಿರಿ ಧಾನ್ಯಗಳ ಸೇವನೆಯಿಂದ ನಿಮಗೆ ಉಂಟಾಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಸಲಾಗಿದೆ.

ಹೆಚ್ಚು ಪೌಷ್ಟಿಕಾಂಶಗಳು ಸಿಗುತ್ತವೆ-ಸಿರಿ ಧಾನ್ಯಗಳಲ್ಲಿ ನಮ್ಮ ದೇಹಕ್ಕೆ ವೈದ್ಯರು ಹೇಳಿರುವ ಅಗತ್ಯತೆಗೆ ತಕ್ಕಂತೆ ಬೇಕಾಗಿರುವ ಪೌಷ್ಟಿಕ ಸತ್ವಗಳಾದ ತಾಮ್ರ, ಮೆಗ್ನೀಷಿಯಂ, ಪಾಸ್ಪರಸ್, ಮ್ಯಾಂಗನೀಸ್ ಮತ್ತು ಇತರ ಪೌಷ್ಟಿಕ ಸತ್ವಗಳು ಸಾಕಷ್ಟು ಲಭ್ಯವಿವೆ.

ಸಮತೋಲನವಾದ ಆಹಾರ ಪದ್ಧತಿಯಲ್ಲಿ ಸಿರಿ ಧಾನ್ಯಗಳು ನಮಗೆ ಆರೋಗ್ಯಕರವಾದ ಜೀವನವನ್ನು ಒದಗಿಸುತ್ತವೆ ಎಂದು ಹೇಳಬಹುದು. ಏಕೆಂದರೆ ಇತ್ತೀಚಿಗೆ ಜನರ ಬದಲಾದ ಜೀವನ ಶೈಲಿಯಿಂದಒಮ್ಮೆಲೇ ಕಾಡುತ್ತಿರುವ ಹೃದಯದ ಸಮಸ್ಯೆಗಳು, ಪಾರ್ಶ್ವವಾಯು, ರಕ್ತದ ಒತ್ತಡ, ಮಧುಮೇಹ ಹೀಗೆ ಹಲವು ಬಗೆಯ ದೀರ್ಘ ಕಾಲ ಕಾಡುವ ಕಾಯಿಲೆಗಳು ಜನರ ಜೀವವನ್ನು ಮತ್ತು ಜೀವನವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಹಾಗಾಗಿ ಈ ಸಂದರ್ಭದಲ್ಲಿ ಅಗಾಧವಾದ ಪೌಷ್ಟಿಕಾಂಶಗಳನ್ನು ಒಳಗೊಂಡ ಸಿರಿ ಧಾನ್ಯಗಳ ಅವಶ್ಯಕತೆ ಜನರಿಗೆ ತುಂಬಾ ಇದೆ.

ಕಡಿಮೆ ಕ್ಯಾಲೋರಿ ಪ್ರಮಾಣ-ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಿರಿ ಧಾನ್ಯಗಳು ಸಹಾಯ ಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ.ನಿಮ್ಮ ದೇಹದ ತೂಕವನ್ನು ನಿಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಆಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತವೆ.

ಪ್ರತಿ ದಿನವೂ ತಾವು ಸೇವಿಸುತ್ತಿರುವ ಕ್ಯಾಲೋರಿಗಳ ಬಗ್ಗೆ ಹೆಚ್ಚು ಗಮನ ಹೊಂದಿದ ಜನರಿಗೆ ಹೇಳಿ ಮಾಡಿಸಿದ ಆಹಾರಗಳು ಎಂದರೆ ಅದು ಸಿರಿ ಧಾನ್ಯಗಳು ಎಂದು ಹೇಳಬಹುದು.ನಿಮ್ಮ ಇಡೀ ದಿನ ಚುರುಕುತನದಿಂದ ಕೂಡಿರಲು ಮತ್ತು ನಿಮ್ಮ ದೇಹ ಸದೃಢತೆಯಿಂದ ನಡೆದುಕೊಳ್ಳಲು ಸಿರಿ ಧಾನ್ಯಗಳು ತುಂಬಾ ಸಹಕಾರಿ.

ರೋಗ – ನಿರೋಧಕ ಶಕ್ತಿ ಹೆಚ್ಚಾಗುತ್ತದೆ–ನಿಮಗೆ ರೋಗ – ನಿರೋಧಕ ಶಕ್ತಿ ಕಡಿಮೆ ಇದ್ದಷ್ಟೂ ಹೆಚ್ಚು ಅನಾರೋಗ್ಯಕ್ಕೆ ಗುರಿ ಆಗುವ ಸಾಧ್ಯತೆ ಇರುತ್ತದೆ. ಉದಾಹರಣೆಯಾಗಿ ಹೇಳಬೇಕೆಂದರೆ ದಿನ ಬೆಳಗಾದರೆ ನೀವೇ ನೋಡುತ್ತಿದ್ದೀರಿ. ಯಾರಿಗೆ ರೋಗ – ನಿರೋಧಕ ಶಕ್ತಿ ಕಡಿಮೆ ಇದೆ ಅವರಿಗೆ ಕೊರೋನಾ ಜೀವ ಹಿಂಡುತ್ತಿದೆ.

ರೋಗ – ನಿರೋಧಕ ಶಕ್ತಿ ಸಮರ್ಪಕವಾಗಿ ಕೆಲಸ ಮಾಡುತ್ತಿರುವವರು ಕೊರೋನಾದ ವಿರುದ್ಧ ಹೋರಾಡಿ ಗೆದ್ದು ಹೊರ ಬರುತ್ತಿದ್ದಾರೆ. ಹಾಗಾಗಿ ಈ ಸಮಯದಲ್ಲಿ ನಿಮ್ಮ ದೇಹದ ರೋಗ – ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಸಿರಿ ಧಾನ್ಯಗಳನ್ನು ನೀವು ಸೇವಿಸುವುದು ಒಳ್ಳೆಯದು.ನಿಮ್ಮ ದೇಹದಲ್ಲಿ ಪ್ರೋಟೀನ್ ಅಂಶವನ್ನು ಹೆಚ್ಚು ಮಾಡುವುದರಿಂದ ಹಿಡಿದು ಮಳೆಗಾಲದ ಈ ಸಮಯದಲ್ಲಿ ಎದುರಾಗುವ ಬಗೆ ಬಗೆಯ ಸೋಂಕುಗಳಿಂದ ನಿಮ್ಮ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ.

ಹೊಟ್ಟೆ ಹಸಿವಿನ ನಿವಾರಣೆ–ಸಾಧಾರಣವಾಗಿ ನೀವು ಪ್ರತಿ ದಿನ ಸೇವಿಸುವ ಯಾವುದೇ ಆಹಾರದಲ್ಲಿ ಕಾರ್ಬೋಹೈಡ್ರೆಟ್ ಅಂಶ ಇದ್ದೇ ಇರುತ್ತದೆ. ಬೆಳಗಿನ ಸಮಯದಲ್ಲಿ ನೀವು ಸೇವನೆ ಮಾಡುವ ಆಹಾರ ಮಧ್ಯಾಹ್ನದ ಹೊತ್ತಿಗೆ ಜೀರ್ಣವಾಗಿ ಅದಾಗಲೇ ಹೊಟ್ಟೆ ಹಸಿವು ಪ್ರಾರಂಭ ಆಗಿರುತ್ತದೆ.

ಆಗ ಕೈಗೆ ಸಿಕ್ಕ ಅನಾರೋಗ್ಯಕರ ಆಹಾರಗಳ ಸೇವನೆಗೆ ಮುಂದಾಗುತ್ತೀರಿ. ಇದರಿಂದ ಆರೋಗ್ಯ ಹಾಳಾಗುತ್ತದೆ. ಆದರೆ ಸಿರಿ ಧಾನ್ಯಗಳ ವಿಚಾರದಲ್ಲಿ ಹಾಗಾಗುವುದಿಲ್ಲ.ನಿಮ್ಮ ಹೊಟ್ಟೆ ಹಸಿವನ್ನು ನಿವಾರಣೆ ಮಾಡಿ ತುಂಬಾ ಹೊತ್ತಿನ ತನಕ ಮತ್ತೊಮ್ಮೆ ಹೊಟ್ಟೆ ಹಸಿವು ಉಂಟಾಗದಂತೆ ನಿಮ್ಮನ್ನು ನೋಡಿಕೊಂಡು ನಿಮ್ಮ ದೇಹದಲ್ಲಿ ವಿಪರೀತ ಬೊಜ್ಜು ಮತ್ತು ಕೊಬ್ಬಿನ ಅಂಶ ಜೊತೆಗೆ ಕೊಲೆಸ್ಟ್ರಾಲ್ ಅಂಶ ತುಂಬಿಕೊಳ್ಳುವುದನ್ನು ತಪ್ಪಿಸುತ್ತದೆ.

ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ==ಸಿರಿ ಧಾನ್ಯಗಳಲ್ಲಿ ಕಂಡು ಬರುವ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ನಿಮ್ಮನ್ನು ಸಕ್ಕರೆ ಕಾಯಿಲೆಯಿಂದ ತಕ್ಕಮಟ್ಟಿಗೆ ಪಾರು ಮಾಡುತ್ತದೆ ಎಂದು ಹೇಳಬಹುದು.ಸಕ್ಕರೆ ಕಾಯಿಲೆ ಇಲ್ಲದವರಿಗೆ ಮುಂಬರುವ ದಿನಗಳಲ್ಲಿ ಸಕ್ಕರೆ ಕಾಯಿಲೆ ಬರದಂತೆ ನೋಡಿಕೊಳ್ಳುತ್ತದೆ. ಈಗಾಗಲೇ ಮಧುಮೇಹದ ನಿಯಂತ್ರಣ ಮೀರಿ ಹೋಗಿರುವವರಿಗೆ ತಾವು ತೆಗೆದುಕೊಳ್ಳುತ್ತಿರುವ ಔಷಧಿಗಳ ಜೊತೆಗೆ ಸಿರಿ ಧಾನ್ಯಗಳನ್ನು ಸೇವನೆ ಮಾಡುತ್ತಾ ಬಂದರೆ ಕ್ರಮೇಣವಾಗಿ ಮಧುಮೇಹ ನಿಮ್ಮ ನಿಯಂತ್ರಣಕ್ಕೆ ಬರುತ್ತದೆ.

ಹೃದಯದ ಸಮಸ್ಯೆಗಳು ದೂರ–ಸಿರಿ ಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದ ನೈಸರ್ಗಿಕ ಕೊಬ್ಬಿನ ಅಂಶ ಇರುವುದರಿಂದ ನೀವು ಸೇವಿಸುವ ಇತರ ಆಹಾರ ಪದಾರ್ಥಗಳಿಂದ ಒದಗುವ ಅನಾರೋಗ್ಯಕರ ಕೊಬ್ಬಿನ ಅಂಶ ಮತ್ತು ಕೊಲೆಸ್ಟ್ರಾಲ್ ಅಂಶ

ನಿಮ್ಮ ದೇಹದ ಮಾಂಸ – ಖಂಡಗಳ ಮೇಲೆ ಮತ್ತು ಇತರ ಅಂಗಾಂಗಗಳ ಮೇಲೆ ಶೇಖರಣೆ ಆಗಿ ನಿಮಗೆ ಹೃದಯಾಘಾತ, ಪಾರ್ಶ್ವವಾಯು ಮತ್ತು ಇನ್ನಿತರ ಹೃದಯ ರಕ್ತ ನಾಳಗಳಿಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುತ್ತವೆ.

ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರು ಹೃದಯ ಸಂಬಂಧಿ ಸಮಸ್ಯೆಗಳಿಂದ ಪಾರಾಗಲು ಸಿರಿ ಧಾನ್ಯಗಳನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

ನಿಜ ಹೇಳಬೇಕೆಂದರೆ ನಾವು ಈಗ ಪಾಲನೆ ಮಾಡುತ್ತಿರುವ ನಮ್ಮ ಆಹಾರ ಪದ್ಧತಿಯಲ್ಲಿ ನಮಗೆ ಬೇಕಾದ ಪೌಷ್ಟಿಕಾಂಶಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಿಗುತ್ತಿವೆ. ಹಾಗಾಗಿ ಉತ್ತಮ ಜೀವನ ಶೈಲಿ ನಮ್ಮದಾಗಬೇಕಾದರೆ ಇಂದು ನಾವು ಸಿರಿ ಧಾನ್ಯಗಳನ್ನು ಸೇವನೆ ಮಾಡಲೇಬೇಕು.

Related Post

Leave a Comment