ಮಾಂಸ ಕ್ಕಿಂತ ಹೆಚ್ಚು ಕ್ಯಾಲೋರಿ ಈ ಬೀಜದಲ್ಲಿದೆ! 99%ಜನಕ್ಕೆ ಗೊತ್ತಿಲ್ಲ!ಸುಸ್ತು ,ನಿಶ್ಯಕ್ತಿ ,ಬಲಹೀನತೆಗೆ ಮೂಳೆಗಳ ನೋವಿಗೆ ಉತ್ತಮ!

0 56

ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಇಟ್ಟುಕೊಂಡು ಬಾಯಾರಿಕೆ ನೀಗಿಸುವ ಅತ್ಯಂತ ಅತ್ಯುತ್ತಮ ಹಣ್ಣು ಅಂದರೆ ಅದು ಕಲ್ಲಂಗಡಿ ಹಣ್ಣು.ದಣಿವಾದಾಗ ಒಂದು ತುಂಡು ಕಲ್ಲಂಗಡಿ ಹಣ್ಣನ್ನು ತಿಂದರೆ ಸಾಕು ತೃಪ್ತಿ ಸಿಗುತ್ತದೆ.ಕಲ್ಲಂಗಡಿ ಹಣ್ಣಿನಲ್ಲಿ ಮಾತ್ರವಲ್ಲ ಅದರ ಬೀಜದಲ್ಲಿ ಕೂಡ ಅನೇಕ ಆರೋಗ್ಯಕಾರಿ ಉಪಯೋಗಗಳು ಇವೆ ಎಂದು ಸಾಬೀತಾಗಿದೆ.

ಕಲ್ಲಂಗಡಿ ಹಣ್ಣುಗಳು ಹಳದಿ ಹಾಗೂ ಕಿತ್ತಳೆ ಬಣ್ಣದಲ್ಲಿ ವಿಶ್ವದ ಎಲ್ಲಾ ಕಡೆಗಳಲ್ಲೂ ಲಭ್ಯ .ನಿಮಗೆ ಆಶ್ಚರ್ಯ ಆಗಬಹುದು ಬಿಳಿಯ ಸಿಪ್ಪೆಯನ್ನು ಹೊಂದಿರುವ ಕಲ್ಲಂಗಡಿ ಹಣ್ಣು ಸಹ ಸಿಗುತ್ತದೆ.ಚೀನಾದ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಇತರೆ ಬೀಜಗಳೊಂದಿಗೆ ಸೇರಿಸಿ ಸೇವನೆ ಮಾಡುತ್ತಾರೆ.

ವಿಯೆಟ್ನಮ್ ಹೊಸ ವರ್ಷದ ರಜೆ ಸಂದರ್ಭದಲ್ಲಿ ಈ ಹಣ್ಣಿನ ಬೀಜಗಳನ್ನುತಿನ್ನುತ್ತಾರೆ.ಕಾರಣ ಈ ಹಣ್ಣಿನ ಬೀಜದಲ್ಲಿ ವಿಟಮಿನ್ ಇ , ಬಿ-6 , ವಿಟಮಿನ್ ಸಿ ಸಾರವೆ ಇದೆ.ಭಾರತದಲ್ಲಿ ಹಣ್ಣುಗಳನ್ನು ತಿಂದು ಬೀಜವನ್ನು ಬಿಸಾಕುತ್ತಾರೆ. ಆದರೆ ಚೀನಾ ಅಥವಾ ವಿಯೆಟ್ನಾಮ್ ದೇಶದಲ್ಲಿ ಬೀಜಗಳನ್ನು ಯಾವುದೇ ಕಾರಣಕ್ಕೂ ಬಿಸಾಡುವುದಿಲ್ಲ.ಕಲ್ಲಂಗಡಿ ಹಣ್ಣಿನ ಬೀಜದ ಸೇವನೆಯಿಂದ ದೊರೆಯುವ ಉಪಯೋಗಗಳು :ಇನ್ನು ಕಲ್ಲಂಗಡಿ ಹಣ್ಣಿನ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಸುಸ್ತು , ಬಲಹೀನತೆ ಕಡಿಮೆಯಾಗುತ್ತದೆ.ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಯಾರ ಮೂಳೆಗಳು ದುರ್ಬಲವಾಗಿರುತ್ತದೆಯೋ ಅಂಥವರು ಪ್ರತಿದಿನ ಸೇವಿಸಿದರೆ ಮೂಳೆಗಳು ಬಲಶಾಲಿಯಾಗುತ್ತವೆ.

ಇನ್ನು ಕಲ್ಲಂಗಡಿ ಹಣ್ಣಿನ ಬೀಜಗಳು ಕೂದಲ ಬೆಳವಣಿಗೆಗೂ ಸಹ ಸಹಾಯ ಮಾಡುತ್ತದೆ.ಕಲ್ಲಂಗಡಿ ಹಣ್ಣಿನ ಬೀಜಗಳು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.ಕಲ್ಲಂಗಡಿ ಹಣ್ಣಿನ ಬೀಜಗಳು ಚರ್ಮದ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ.ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮ್ಯಾಗ್ನಿಶಿಯಮ್ ಇದೆ ಮತ್ತು ಇದು ಹೃದಯವನ್ನು ಸುರಕ್ಷಿತವಾಗಿಡುತ್ತದೆ.ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಚಯಾಪಚಾಯ ಕ್ರಿಯೆಯನ್ನು ಸುಗಮವಾಗಿಸುತ್ತದೆ.ರಕ್ತದ ಒತ್ತಡ ಮತ್ತು ದೇಹದ ಆರೋಗ್ಯಕ್ಕೆ ಇದು ಅತ್ಯುತ್ತಮವಾದ ನೈಸರ್ಗಿಕ ಔಷಧಿಯಾಗಿದೆ.

ಕಲ್ಲಂಗಡಿ ಬೀಜಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹೆಚ್ಚಾಗಿರುವ ಕಾರಣ ಇದು ಅಕಾಲಿಕ ವಯಸ್ಸಾಗುವುದನ್ನು ತಡೆಗಟ್ಟುತ್ತದೆ.
ಇದು ಚರ್ಮವನ್ನು ಆರೋಗ್ಯವಾಗಿಟ್ಟುಕೊಂಡು ,ನವ ಯುವಕರಂತೆ ಕಾಣುವ ಹಾಗೆ ಮಾಡುತ್ತದೆ.ಬೇಯಿಸಿದ ಕಲ್ಲಂಗಡಿ ಬೀಜಗಳನ್ನು ಒಂದು ಹಿಡಿ ಪ್ರತಿದಿನ ತಿಂದರೆ ಅದರಿಂದ ಮಧುಮೇಹ ನಿಯಂತ್ರಣದಲ್ಲಿ ಬರುತ್ತದೆ.ನಿಯಮಿತವಾಗಿ ಇದರ ಸೇವನೆ ಮಾಡಿದರೆ ಮಧುಮೇಹ ನಿಯಂತ್ರಿಸಲು ತುಂಬ ಪರಿಣಾಮಕಾರಿ ಔಷಧ ಎಂದು ಪರಿಗಣಿಸಲಾಗಿದೆ.ಯಾವುದೇ ರೀತಿಯ ಅನಾರೋಗ್ಯವು ನಿಮ್ಮನ್ನು ಕಾಡುತ್ತ ಇದ್ದರೆ ಅದರಿಂದ ಸಂಪೂರ್ಣವಾಗಿ ಚೇತರಿಕೆ ಪಡೆಯಲು ಕಲ್ಲಂಗಡಿ ಬೀಜಗಳನ್ನು ಸೇವನೆ ಮಾಡಬೇಕು.ಒಂದೆರಡು ದಿನಗಳಲ್ಲಿ ಇದರ ಪರಿಣಾಮ ಕಾಣಬಹುದು.

ನೆನಪಿನ ಶಕ್ತಿ ಕಡಿಮೆ ಇರುವವರು ಕಲ್ಲಂಗಡಿ ಬೀಜಗಳನ್ನು ಸೇವನೆ ಮಾಡಿದರೆ ಬಹು ಬೇಗ ನೆನಪಿನ ಶಕ್ತಿ ಹೆಚ್ಚಾಗುತ್ತದೆ.ಕಲ್ಲಂಗಡಿ ಬೀಜದಲ್ಲಿ ಲೈಕೋಪೆನ್ , ಆಂಟಿ ಅಕ್ಸಿಡೆಂಟ್ಸ್ ಸಮೃದ್ಧವಾಗಿದ್ದು ಪುರುಷರಲ್ಲಿ ಫಲವತ್ತತೆ ಮಟ್ಟವನ್ನು ಹೆಚ್ಚಿಸುತ್ತದೆ.ಒಣಗಿಸಿದ ಕಲ್ಲಂಗಡಿ ಬೀಜವನ್ನು ಆಹಾರ ಕ್ರಮದಲ್ಲಿ ಸೇರಿಸಿ ತಿನ್ನಬೇಕು.ಮ್ಯಾಗ್ನಿಶಿಯಮ್ ದೇಹದ ಕಾರ್ಯ ಚಟುವಟಿಕೆನ್ನು ಸರಿಯಾದ ರೀತಿಯಲ್ಲಿ ನಿಯಂತ್ರಣದಲ್ಲಿ ಇಡಲು ನೆರವಾಗುತ್ತದೆ.ದೇಹದಲ್ಲಿ ರಕ್ತದ ಒತ್ತಡವನ್ನು ನಿಯಂತ್ರಣ ಹಾಗೂ ಚಯಾಪಚಯ ಕ್ರಿಯೆಗೆ ನೆರವಾಗುತ್ತದೆ.ಕಲ್ಲಂಗಡಿ ಬೀಜಗಳಲ್ಲಿ ಶೇ 80ರಷ್ಟು ಅಪರಿಯಾತ ಕೊಬ್ಬು ಇದ್ದು ,ಇದು ದೇಹಕ್ಕೆ ತುಂಬಾ ಒಳ್ಳೆಯದು.ಒಮೆಗಾ – 3 ಕೊಬ್ಬಿನ ಆಮ್ಲವು ದೇಹದ ಅನಾರೋಗ್ಯಕರ ಸಮಸ್ಯೆಗಳನ್ನು ದೂರ ಇಡುವುದು.

ಬೇಸಿಗೆಗೆ ತಂಪಾದ ಮಸಾಲ ಜ್ಯುಸ್ .ಮಧುಮೇಹ ಈಗ ಸರ್ವೇ ಸಾಮಾನ್ಯವಾಗಿ ಕಂಡುಬರುವ ಆರೋಗ್ಯದ ಸಮಸ್ಯೆಯಾಗಿದೆ.
ಇದನ್ನು ಸರಿಯಾಗಿ ನಿಭಾಯಿಸಲಿಲ್ಲವಾದಲ್ಲಿ ಇದು ಗಂಭೀರ ಪ್ರಮಾಣಕ್ಕೆ ತಿರುಗುತ್ತೇವೆ.ಒಂದು ವೇಳೆ ನೀವು ಮಧುಮೇಹದಿಂದ ಬಳಲುತ್ತ ಇದ್ದಲ್ಲಿ 40 ರಿಂದ 45 ನಿಮಿಷಗಳ ಕಾಲ ಕಲ್ಲಂಗಡಿ ಬೀಜಗಳನ್ನು ನೀರಿನಲ್ಲಿ ಕುದಿಸಿ ನಂತರ ಅದನ್ನು ಟೀ ರೀತಿ ಪ್ರತಿದಿನ ಸೇವಿಸುತ್ತಾ ಬನ್ನಿ ಮಧುಮೇಹಕ್ಕೆ ಕಾರಣವಾದ ಲೋಪದೋಷಗಳನ್ನು ಸರಿಪಡಿಸುತ್ತದೆ.ಕಲ್ಲಂಗಡಿ ಬೀಜಗಳು ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಇತರೆ ಆರೋಗ್ಯ ಸಮಸ್ಯೆಗಳಿಂದ ದೇಹವು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಕಲ್ಲಂಗಡಿ ಬೀಜಗಳನ್ನು ಸೂಚಿಸಿದ ರೀತಿಯಲ್ಲಿ ಸೇವಿಸಿದರೆ ಎಂಥವರ ಜ್ಞಾಪಕ ಶಕ್ತಿ ಬೇಕಾದ್ರೂ ಚುರುಕಾಗುತ್ತದೆ.
ಪ್ರೋಟೀನ್ ಕೊರತೆಯೂ ಜ್ಞಾಪಕ ಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಆದ್ರೆ ಕಲ್ಲಂಗಡಿ ಬೀಜಗಳು ಈ ಕೊರತೆಯನ್ನು ನೀಗಿಸುತ್ತದೆ. ಮಾನವನ ದೇಹಕ್ಕೆ ಅಮೈನೊ ಆಮ್ಲಗಳು ಅತೀ ಅಗತ್ಯ. ವೈದ್ಯರುಗಳು ಅವುಗಳ ಬದಲಿಗೆ ಸ್ವಾಭಾವಿಕ ಮೂಲಗಳಿಂದ ಈ ಆಮ್ಲಗಳನ್ನು ಪಡೆಯಿರಿ ಎಂದು ಸಲಹೆ ನೀಡುತ್ತಾರೆ. ಕಲ್ಲಂಗಡಿ ಬೀಜಗಳಲ್ಲಿ ಈ ಆಮ್ಲಗಳು ಸ್ವಾಭಾವಿಕವಾಗಿ ಅಡಗಿರುತ್ತದೆ.ಅದನ್ನು ಸೇವಿಸುವ ಮೂಲಕ ನೀವು ಜೀರ್ಣಾಂಗ ವ್ಯೂಹ , ಲೈಂಗಿಕ ಆರೋಗ್ಯ ಮತ್ತು ಹೃದಯಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬಹುದು.

ಧನ್ಯವಾದಗಳು.

Leave A Reply

Your email address will not be published.