2 ವಸ್ತುಗಳನ್ನು ಟೀ ಜೊತೆ ಸೇರಿಸಿ ನಿಮ್ಮ ಟೀ ಅಮೃತವಾಗುತ್ತೆ ಚಿಕ್ಕ ದೊಡ್ಡ 90 ಕಾಯಿಲೆಗಳು ಮಾಯವಾಗುತ್ತೆ!

ಶುಂಠಿಯೂ ಭಾರತೀಯರ ಜೀವನಶೈಲಿಯಲ್ಲಿ ಒಂದು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಶುಂಠಿಯಲ್ಲಿ ಹಲವಾರು ರೀತಿಯ ವೈದ್ಯಕೀಯ ಲಕ್ಷಣಗಳಿವೆ. ಭಾರತೀಯರು ತಮ್ಮ ಪ್ರತಿಯೊಂದು ಆಹಾರ ಪದಾರ್ಥಗಳಲ್ಲಿ ಶುಂಠಿಯನ್ನು ಹೆಚ್ಚಾಗಿ ಬಳಸುತ್ತಾರೆ ಮತ್ತು ಅದರ ಖಾರಕ್ಕೆ ಮತ್ತು ಅದರ ಗಮನಕ್ಕೆ ಹೆಸರುವಾಸಿಯಾಗಿದೆ. ಭಾರತೀಯರ ಪ್ರತಿ ಅಡುಗೆಮನೆಯಲ್ಲಿ ಶುಂಠಿಯೂ ಇದ್ದೇ ಇರುತ್ತದೆ. ಪ್ರತಿಯೊಂದು ಸಾಂಬಾರ್ ಪದಾರ್ಥಗಳು ತನ್ನದೇ ಆದಂತಹ ಮಹತ್ವದ ಗುಣಗಳನ್ನು ಹೊಂದಿದೆ. ಶುಂಠಿಯೂ ತನ್ನ ಖಾರದ ಗುಣ ಮತ್ತು ಸುವಾಸನೆಗೆ ಹೆಸರುವಾಸಿಯಾಗಿದೆ. ಇದನ್ನು ಅಡುಗೆಯಲ್ಲಿ ಬಳಸಿದರೆ ಅದರ ಗಮನ ,ರುಚಿಯೇ ಬೇರೆಯಾಗಿರುತ್ತದೆ.

ಶುಂಠಿಯ ನಿಯಮಿತ ಸೇವನೆಯಿಂದ ಉತ್ತಮ ಆರೋಗ್ಯವನ್ನು ನಾವು ಪಡೆಯಬಹುದು.ಶುಂಠಿಯೂ ಜಿಂಗಿಬರಸ್ಯ ಫ್ಯಾಮಿಲಿಗೆ ಸೇರಿದೆ. ಅರಿಶಿಣ, ಏಲಕ್ಕಿ ಗುಂಪಿಗೆ ಸೇರಿದೆ. ಶುಂಠಿಯನ್ನು ಹಸಿಶುಂಠಿಯಾಗಿ, ಪುಡಿಮಾಡಿ, ಎಣ್ಣೆ ರೀತಿ ಎಲ್ಲಾ ರೀತಿಯಲ್ಲೂ ಉಪಯೋಗಿಸಬಹುದು.

​ಸುಸ್ತು ಮತ್ತು ವಾಕರಿಕೆ ನಿವಾರಿಸುತ್ತದೆ–ಸುಸ್ತು ಮತ್ತು ವಾಕರಿಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅನಾರೋಗ್ಯ ತೊಂದರೆಗಳಿದ್ದರೆ ಅದಕ್ಕೆ ಪರಿಹಾರವನ್ನು ನೀಡುತ್ತದೆ . ಕೆಲವೊಂದು ವರದಿಗಳ ಪ್ರಕಾರ ಶುಂಠಿಯ ಸೇವನೆಯು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.ನಿಮಗೇನಾದರೂ ವಾಕರಿಕೆ, ಸುಸ್ತು ಮತ್ತು ಮಲಬದ್ಧತೆಯ ತೊಂದರೆ ಇದ್ದರೆ ಶುಂಠಿಯನ್ನು ಸೇವಿಸಿ ಎಲ್ಲಾ ಕಾಯಿಲೆಗಳಿಂದ ದೂರವಿರಿ.

ಕೆಲವೊಬ್ಬರಿಗೆ ಬೆಳಿಗ್ಗೆ ಎದ್ದ ತಕ್ಷಣ ತಲೆ ಸುತ್ತಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.ಇದರ ಜೊತೆಗೆ ವಾಕರಿಕೆ ಮತ್ತು ಸುಸ್ತು ಕಾಣಿಸಿಕೊಂಡಾಗ ಅವುಗಳನ್ನು ನಿವಾರಿಸಲು ಔಷಧಗಳನ್ನು ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಗರ್ಭಿಣಿಯರು ಮತ್ತು ಕಿಮೊತೆರಪಿಗೆ ಒಳಗಾದವರು ಇದನ್ನು ಬಳಸಿದರೆ ಉತ್ತಮ ಪರಿಹಾರ ದೊರೆಯುತ್ತದೆ ವಾಕರಿಕೆಯಿಂದ ದೂರ ಉಳಿಯುತ್ತಾರೆ.

ವರದಿಗಳ ಪ್ರಕಾರ ನಿಯಮಿತವಾದ ಶುಂಠಿ ಟೀ ಸೇವನೆಯಿಂದ ಉತ್ತಮವಾದ ಹೃದಯವನ್ನು ಹೊಂದಬಹುದು ಮತ್ತು ಇದು ಹೆಚ್ಚಿನ ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣಲಕ್ಷಣ ಹೊಂದಿದೆ. ಬಿಸಿಬಿಸಿ ಶುಂಠಿ ಚಹಾದ ಸೇವನೆಯಿಂದ ರಕ್ತ ಹೆಪ್ಪುಗಟ್ಟುವಿಕೆ, ಹೃದ್ರೋಗ ,ಕಡಿಮೆ ರಕ್ತದೊತ್ತಡ,ರಕ್ತದ ಚಲನೆ ಮುಂತಾದವುಗಳನ್ನು ಕಡಿಮೆ ಮಾಡುತ್ತದೆ.ಆದ್ದರಿಂದ ಹೃದ್ರೋಗ, ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಶುಂಠಿ ಚಹಾದ ಸೇವನೆಯನ್ನು ನಿಯಮಿತವಾಗಿ ಮಾಡಿ.

​ರೋಗ ನಿರೋಧಕ ಶಕ್ತಿ–ಶುಂಠಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವಿದೆ. ಇದರ ಜೊತೆಗೆ ಆಂಟಿ ಇನ್ಫಾಮೇಟರಿ ಗುಣವನ್ನು ಹೊಂದಿದೆ.ಈ ಗುಣವು ಯಾವುದೇ ರೀತಿಯ ನೋವುಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಲೆನೋವು,ಮುಟ್ಟಿನ ಸಮಯದಲ್ಲಿ ಉಂಟಾಗುವಂತಹ ನೋವು, ಗಂಟಲು ನೋವು, ಸ್ನಾಯು ಸೆಳೆತ ಮುಂತಾದ ಎಲ್ಲ ರೀತಿಯ ನೋವುಗಳಿಗೆ ಪರಿಹಾರ ನೀಡುತ್ತದೆ.ನಿಯಮಿತವಾದ ಶುಂಠಿಯ ಸೇವನೆಯಿಂದ ಸ್ನಾಯುಗಳಿಗೆ ಉತ್ತೇಜಕ ದೊರೆತಂತಾಗುತ್ತದೆ .ಇದರಿಂದ ಯಾವುದೇ ರೀತಿಯ ನೋವುಗಳು ಕಾಣಿಸಿಕೊಳ್ಳುವುದಿಲ್ಲ.

ರೋಗನಿರೋಧಕ ಶಕ್ತಿ ಹೆಚ್ಚಾದಷ್ಟು ರೋಗದ ವಿರುದ್ಧ ಹೋರಾಡಲು ನಮ್ಮ ದೇಹವು ಸ್ಪಂದಿಸುತ್ತದೆ. ರೋಗನಿರೋಧಕ ಶಕ್ತಿ ಇಲ್ಲವೆಂದರೆ ಸಣ್ಣಪುಟ್ಟ ಕಾಯಿಲೆಗಳಿಗೆ ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ನಮ್ಮ ಪ್ರಯತ್ನ ಯಾವಾಗಲೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಡೆಗೆ ಇರಬೇಕು. ಶುಂಠಿಯಲ್ಲಿ ಆಂಟಿ ಆಕ್ಸಿಡೆಂಟ್ಸ್ ಗಳು ಇರುವುದರಿಂದ ಇದು ನಮಗೆ ಒತ್ತಡ ನಿವಾರಕವಾಗಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಯಾವುದೇ ರೀತಿಯ ಉಸಿರಾಟದ ಸಮಸ್ಯೆಗಳಿದ್ದರೂ ಶುಂಠಿ ಹಾಕಿದ ನೀರನ್ನು ಸ್ಟೀಮ್ ತೆಗೆದುಕೊಳ್ಳುವುದರಿಂದ ಉತ್ತಮವಾದ ಆರೋಗ್ಯ ದೊರೆಯುತ್ತದೆ. ಉಸಿರಾಟದ ತೊಂದರೆಯಲ್ಲದೆ ಗಾಳಿಯಲ್ಲಿ ಮಾಲಿನ್ಯವಾಗಿ ತೊಂದರೆ ಅನುಭವಿಸುತ್ತಿದ್ದಾರೆ ಈ ರೀತಿಯ ಸ್ಟೀಮ್ ತೆಗೆದುಕೊಳ್ಳುವುದು ಉತ್ತಮ.

ಬೊಜ್ಜಿನ ಸಮಸ್ಯೆಗೆ ಪರಿಹಾರ 2012 ಕೊಲಂಬಿಯ ಯೂನಿವರ್ಸಿಟಿಯಲ್ಲಿ ಮಾಡಿದ ಒಂದು ವರದಿಯ ಪ್ರಕಾರ ಬಿಸಿಯಾದ ಶುಂಠಿ ಚಹಾವನ್ನು ಸೇವಿಸುವುದರಿಂದ ಅದು ಹಸಿವಿನ ಪ್ರಮಾಣವನ್ನು ಕಡಿಮೆ ಮಾಡಿ ಕಡಿಮೆ ತಿನ್ನುವಂತೆ ಪ್ರೇರೇಪಿಸುತ್ತದೆ. ಇದರಿಂದ ತೂಕ ಹೆಚ್ಚು ಇದ್ದವರು ತೂಕ ಕಡಿಮೆ ಮಾಡಿಕೊಳ್ಳಲು ಉಪಾಯ ಹುಡುಕುತ್ತಿದ್ದರೆ ಶುಂಠಿ ಚಹಾವನ್ನು ನಿಯಮಿತವಾಗಿ ಸೇವಿಸಿ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಿ. ಬೊಜ್ಜಿನ ಸಮಸ್ಯೆಗೆ ಇದು ಪರಿಣಾಮಕಾರಿಯಾದ ಮಂತ್ರವಾಗಿದೆ.

ಇತ್ತೀಚಿನ ದಿನಗಳಲ್ಲಿ ವಯಸ್ಕರಲ್ಲಿ ಹೆಚ್ಚಾಗಿ ಡಯಾಬಿಟಿಸ್ ಎನ್ನುವುದು ಒಂದು ಸಾಮಾನ್ಯ ಕಾಯಿಲೆಯಾಗಿದೆ. ನಿಯಮಿತವಾದ ಬಿಸಿ ಶುಂಠಿ ಚಹಾ ದಿಂದ ಈರೀತಿ ಆಗುವ ಏರುಪೇರುಗಳನ್ನು ತಡೆಯುತ್ತದೆ. ನಿಯಮಿತ ಟೀ ಸೇವನೆಯಿಂದ ಇಂತಹ ರಕ್ತದೊತ್ತಡವು ಕಡಿಮೆಯಾಗುತ್ತದೆ.

​ಬ್ಯಾಕ್ಟೀರಿಯಾ ಮತ್ತು ವೈರಸ್ ಗಳ ಜೊತೆ ಹೋರಾಡಲು ಸಹಾಯ-ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ, ದೈಹಿಕ ಚಟುವಟಿಕೆ ಇಲ್ಲದಿರುವುದು , ಅತಿಯಾದ ಕೋಪ, ಯೋಗ ,ಧ್ಯಾನ ಮುಂತಾದವುಗಳ ಬಗ್ಗೆ ಯಾರಿಗೂ ಒಲವಿಲ್ಲ. ಇಂತಹ ಜೀವನಶೈಲಿಯಿಂದ ಇತ್ತೀಚೆಗೆ ಕ್ಯಾನ್ಸರ್ ಎಂಬ ಮಹಾಮಾರಿ ಗೆ ಬಲಿಯಾಗುತ್ತಿದ್ದಾರೆ ಇಂದಿನ ಯುವಜನತೆ. ಆದರೆ ಶುಂಠಿಯ ನಿಯಮಿತ ಸೇವನೆಯಿಂದ ಕ್ಯಾನ್ಸರ್ ಗೆ ಕಾರಣವಾಗುವ ಜೀವಕೋಶಗಳನ್ನು ಉತ್ಪಾದಿಸುವುದಿಲ್ಲ. ಆದ್ದರಿಂದ ನಿಯಮಿತವಾಗಿ ಶುಂಠಿ ಚಹಾವನ್ನು ಸೇವಿಸುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು.

ಶುಂಠಿಯು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳ ಜೊತೆ ಹೋರಾಡುವ ಅಂಶವನ್ನು ಹೊಂದಿದೆ. ನೆಗಡಿ, ಕೆಮ್ಮು, ಗಂಟಲಿನ ಸಮಸ್ಯೆ, ಹೃದ್ರೋಗ ಸಮಸ್ಯೆ ,ಅಸಿಡಿಟಿ , ಮಧುಮೇಹ,ಕ್ಯಾನ್ಸರ್ ,ಶೀತ ಹೀಗೆ ಶುಂಠಿಯ ಪ್ರಯೋಜನಗಳನ್ನು ಹೇಳುತ್ತಾ ಹೋದರೆ ಅದಕ್ಕೆ ಕೊನೆಯೆಂಬುದೇ ಇಲ್ಲ.

​ಶುಂಠಿ ಟೀ ಮಾಡುವ ವಿಧಾನ-ಒಂದು ಲೋಟ ನೀರಿಗೆ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿ, ಇದಕ್ಕೆ ಅರಿಶಿನವನ್ನು ಸಹ ಹಾಕಬಹುದು. ಇದು ಚೆನ್ನಾಗಿ ಕುದ್ದ ನಂತರ ಇದನ್ನು ಶೋಧಿಸಿ ಬೇಕೆಂದರೆ ಅರ್ಧ ಹೋಳು ನಿಂಬೆ ಹಣ್ಣನ್ನು ಹಿಂಡಿ ತದನಂತರದಲ್ಲಿ ಕುಡಿಯಿರಿ.ಇದಕ್ಕೆ ಹಾಲನ್ನು ಸಹ ಸೇರಿಸಿ ಸೇವಿಸಬಹುದು ಆದರೆ ಉತ್ತಮ ಫಲಿತಾಂಶ ಬೇಕೆಂದರೆ ಹಾಲು ರಹಿತವಾಗಿ ಸೇವಿಸುವುದು ಉತ್ತಮ. ಮತ್ತೊಂದು ವಿಧಾನವೆಂದರೆ ಇದಕ್ಕೆ ಚಹಾ ಪುಡಿ ಬಳಸಿ ತದನಂತರದಲ್ಲಿ ಶುಂಠಿ, ಮೆಣಸು ಉಪಯೋಗಿಸಿ ಅದಕ್ಕೆ ಹಾಲನ್ನು ಮಿಶ್ರ ಮಾಡಿ ಸ್ವಲ್ಪ ಬೆಲ್ಲವನ್ನು ಸೇರಿಸಿ ಕುಡಿಯುವುದು ಸಹ ಉತ್ತಮವಾದ ಮಾರ್ಗವಾಗಿದೆ.

ನಿಸರ್ಗದಲ್ಲಿರುವ ಎಲ್ಲಾ ಪದಾರ್ಥಗಳು ಮಾನವನಿಗೆ ಒಂದಲ್ಲಾ ಒಂದು ರೀತಿಯ ಪ್ರಯೋಜನವನ್ನು ನೀಡುತ್ತದೆ.ಅವುಗಳ ಸರಿಯಾದ ಬಳಕೆ ಮತ್ತು ಉಪಯೋಗಗಳನ್ನು ತಿಳಿದುಕೊಂಡು ತದನಂತರ ನಮ್ಮ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಂಡರೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು.ಶುಂಠಿಯೂ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವಂತಹ ಪದಾರ್ಥವಾಗಿದೆ ಆದರೆ ಅದರ ಉಪಯೋಗಗಳು ಏನು ಎನ್ನುವುದನ್ನು ನಾವು ತಿಳಿದುಕೊಳ್ಳುವ ಪ್ರಯತ್ನ ಮಾಡುವುದೇ ಇಲ್ಲ.

ಏಲಕ್ಕಿ, ಚಕ್ಕೆ ಸೇರಿದಂತೆ ವಿವಿಧ ಮಸಾಲೆಗಳು ಸಹ ನಮಗೆ ಈ ಸಮಯದಲ್ಲಿ ಪ್ರಯೋಜನ ನೀಡುತ್ತದೆ. ಏಲಕ್ಕಿ, ಚಕ್ಕೆ ಹಾಗೂ ಲವಂಗವನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇಲ್ಲದಿದ್ದರೆ ಹಾಗೆಯೇ ನೀವು ಕುದಿಯುವ ನೀರಿಗೆ ಹಾಕಿ. ಚೆನ್ನಾಗಿ ಅದನ್ನು ಕುದಿಸಿ. ನಂತರ ಅದನ್ನು ಸೋಸಿಕೊಂಡು ಕುಡಿಯಿರಿ. ನಿಮಗೆ ಬೇಕು ಎಂದರೆ ಜೇನುತುಪ್ಪ ಮತ್ತು ನಿಂಬೆ ರಸ ಹಾಕಿ.ಇದರಿಂದ ನಿಮಗೆ ಹಲವಾರು ರೀತಿಯ ಅರೋಗ್ಯ ಸಮಸ್ಸೆಗಳು ನಿವಾರಣೆ ಆಗುತ್ತದೆ.

Related Post

Leave a Comment