ಮೂಳೆಗಳು ಸ್ಟ್ರಾಂಗ್ ಆಗಿ ಇರ್ಬೇಕಾ..?ಈ ಬೆಳೆಯನ್ನು ಅಡುಗೆಯಲ್ಲಿ ಬಳಸಿ ನೋಡಿ!

Strong bone Treatment ನಾವು ಸೇವಿಸುವ ಎಲ್ಲ ಬಗೆಯ ಆಹಾರ ಪದಾರ್ಥಗಳಲ್ಲಿ ಕಾಳುಗಳಿಗೆ ಹಾಗೂ ಬೇಳೆಗಳಿಗೆ ವಿಶೇಷವಾದ ಸ್ಥಾನಮಾನವಿದೆ. ಏಕೆಂದರೆ ಬೇರೆ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಇವುಗಳಿಂದ ನಮ್ಮ ದೇಹಕ್ಕೆ ಸಿಗುವ ಪೌಷ್ಟಿಕ ಸತ್ವಗಳ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ. ಮಾಂಸಾಹಾರ ಸೇವನೆ ಮಾಡದೆ ಕೇವಲ ಸಸ್ಯಹಾರ ಗಳ ಮೇಲೆ ಅವಲಂಬಿತರಾಗಿರುವವರಿಗಂತೂ ಹೇಳಿ ಮಾಡಿಸಿದ ಆಹಾರಗಳಿವು.

ಮನೆಯಲ್ಲಿ ತಯಾರು ಮಾಡುವ ವಿವಿಧ ಬಗೆಯ ಖಾದ್ಯಗಳಿಗೆ ನಾವು ಬಗೆ ಬಗೆಯ ಬೇಳೆಗಳನ್ನು ಬಳಕೆ ಮಾಡುತ್ತೇವೆ. ಒಂದೊಂದು ಬಗೆಯ ಬೇಳೆ ಕಾಳುಗಳು ನಮ್ಮ ಆರೋಗ್ಯಕ್ಕೆ ತಮ್ಮದೇ ಆದ ರೀತಿಯಲ್ಲಿ ಒಂದೊಂದು ಬಗೆಯ ಪ್ರಯೋಜನಗಳನ್ನು ಕೊಡುತ್ತಾ ಹೋಗುತ್ತವೆ.

ಅದರಲ್ಲಿ ಕೆಂಪು ಬಣ್ಣದ ಬೇಳೆ ಕಾಳುಗಳು ಅತಿ ಹೆಚ್ಚಿನ ಪ್ರಮಾಣದ ನಾರಿನ ಅಂಶ ಪ್ರೊಟೀನ್ ಅಂಶ ವಿಟಮಿನ್ ಮತ್ತು ಖನಿಜಾಂಶಗಳನ್ನು ನಮಗೆ ಒದಗಿಸುತ್ತವೆ ಎಂದು ಹೇಳಲಾಗಿದೆ. ಈ ಲೇಖನದಲ್ಲಿ ಕೆಂಪು ಬಣ್ಣದ ಬೇಳೆ ಕಾಳುಗಳ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಬೇಳೆ ಕಾಳುಗಳ ಆರೋಗ್ಯ ಪ್ರಯೋಜನಗಳು ಮತ್ತು ಪೌಷ್ಟಿಕ ಸತ್ವಗಳು–ಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿ ಮತ್ತು ಹೆಚ್ಚಿನ ಪ್ರಮಾಣದ ಪ್ರೊಟೀನ್ ಅಂಶವಿರುವ ಬೇಳೆ ಕಾಳುಗಳಲ್ಲಿ ಕೆಲವರು ಆರೋಗ್ಯಕ್ಕೆ ಮಾರಕವಾಗಿರುವ ಗ್ಲುಟೆನ್ ಅಂಶ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಇದೊಂದು ನಿಮ್ಮ ಆರೋಗ್ಯಕ್ಕೆ ಪೌಷ್ಟಿಕಾಂಶ ಭರಿತ ನೈಸರ್ಗಿಕ ಆಹಾರ ಪದಾರ್ಥ ಎಂದು ಹೇಳಬಹುದು.

ಸಸ್ಯಾಧಾರಿತ ಪ್ರೊಟೀನ್ ಅಂಶ ತುಂಬಾ ಸಿಗುತ್ತದೆ–ಈ ಹಿಂದೆ ಹೇಳಿದಂತೆ ಕೆಂಪು ಬಣ್ಣದ ಬೇಳೆ ಕಾಳುಗಳಲ್ಲಿ ಪ್ರೋಟೀನ್ ಅಂಶ ಯಥೇಚ್ಛವಾಗಿದೆ. ಸುಮಾರು 50 ಗ್ರಾಂ ಬೇಳೆ ಕಾಳುಗಳಲ್ಲಿ ನಿಮಗೆ ಸರಿ ಸುಮಾರು 12 ಗ್ರಾಂ ಪ್ರೋಟೀನ್ ಅಂಶವೇ ಸಿಗುತ್ತದೆ.

ಇದು ನಿಮ್ಮ ದಿನ ನಿತ್ಯದ ಅಗತ್ಯತೆಯ ಕಾಲು ಭಾಗದಷ್ಟು ಪ್ರೋಟಿನ್ ಅಂಶವನ್ನು ನಿಮ್ಮ ದೇಹಕ್ಕೆ ಪೂರೈಕೆ ಮಾಡುತ್ತದೆ ಎಂದು ಹೇಳಬಹುದು. ಸಸ್ಯಹಾರಿಗಳಿಗೆ ಮತ್ತು ಮಾಂಸಾಹಾರವನ್ನು ಸೇವಿಸದೇ ಇರುವವರಿಗೆ ಮಾಂಸಾಹಾರದ ಪ್ರಮಾಣದಲ್ಲಿ ದೇಹಕ್ಕೆ ಪೌಷ್ಟಿಕ ಅಂಶಗಳನ್ನು ಒದಗಿಸುವ ಏಕೈಕ ಆಹಾರ ಇದಾಗಿದೆ.

ಹೆಚ್ಚಿನ ನಾರಿನ ಪ್ರಮಾಣ ಲಭ್ಯವಿದೆ–ಮುಖ್ಯವಾಗಿ ಮಧುಮೇಹ ಇರುವವರಿಗೆ ಕೆಂಪು ಬಣ್ಣದ ಬೇಳೆ ಕಾಳುಗಳಿಂದ ಸಾಕಷ್ಟು ಅನುಕೂಲವಿದೆ. ಏಕೆಂದರೆ ಈ ಬೆಳೆ ಕಾಳುಗಳಲ್ಲಿ ಸಿಗುವಂತಹ ನಾರಿನ ಅಂಶ ಮಧುಮೇಹಿಗಳು ಸೇವಿಸಿದ ಆಹಾರವನ್ನು ನಿಧಾನವಾಗಿ ಜೀರ್ಣಮಾಡುವ ಮೂಲಕ ಅವರ ಆಹಾರದಲ್ಲಿನ ಸಕ್ಕರೆ ಪ್ರಮಾಣ ಬಹಳ ಬೇಗನೆ ರಕ್ತ ಸಂಚಾರದಲ್ಲಿ ಬೆರೆತು ಇಡೀ ದೇಹದ ತುಂಬಾ ಹಬ್ಬುವುದನ್ನು ತಡೆಗಟ್ಟುತ್ತದೆ.ಒಂದು ಕಪ್ ಕೆಂಪು ಬೇಳೆ ಕಾಳುಗಳಲ್ಲಿ ಸುಮಾರು 15 ಗ್ರಾಂ ನಾರಿನ ಅಂಶ ಸಿಗುವ ಕಾರಣದಿಂದ ನಿಮ್ಮ ದೇಹದ ಪ್ರತಿ ದಿನದ ಅಗತ್ಯತೆಗೆ ತಕ್ಕಂತೆ ಶೇಕಡ 50% ದಷ್ಟು ನಾರಿನ ಅಂಶ ನಿಮಗೆ ಲಭ್ಯವಾದಂತೆ ಆಗುತ್ತದೆ.

ಅಗತ್ಯವಾದ ಖನಿಜಾಂಶಗಳು ಸಿಗುವುದು ವಿಶೇಷ–ಸಾಮಾನ್ಯವಾಗಿ ನಾವು ಸೇವಿಸುವ ಆಹಾರದಲ್ಲಿ ಕಬ್ಬಿಣ ಅಂಶ ಮತ್ತು ಮೆಗ್ನೀಸಿಯಮ್ ಅಂಶ ನಮಗೆ ಸಿಕ್ಕಿದರೆ ಒಳ್ಳೆಯದು. ಅಂತಹ ಆಹಾರಗಳಿಗೆ ಹುಡುಕುವ ಬದಲು ಪ್ರತಿ ದಿನದ ಆಹಾರ ತಯಾರಿಯಲ್ಲಿ ಕೆಂಪು ಬೇಳೆ ಕಾಳುಗಳನ್ನು ಬಳಕೆ ಮಾಡುವುದು ಸೂಕ್ತ.

ತುಂಬಾ ಕಡಿಮೆ ಕ್ಯಾಲೊರಿಗಳು ಇದರಲ್ಲಿವೆ–ಈಗಾಗಲೇ ತಮ್ಮ ದೇಹದ ತೂಕವನ್ನು ತಮಗೆ ಅರಿವಿಲ್ಲದೆ ಹೆಚ್ಚು ಮಾಡಿಕೊಂಡಿರುವವರು ಸಾಧಾರಣವಾಗಿ ಕಡಿಮೆ ಕ್ಯಾಲೋರಿಗಳಿರುವ ಆಹಾರಗಳನ್ನು ಸೇವಿಸಲು ಮುಂದಾಗುತ್ತಾರೆ.ಅವರ ಆಯ್ಕೆಯಲ್ಲಿ ಮೊದಲನೇ ಸ್ಥಾನದಲ್ಲಿ ಕೆಂಪು ಬೇಳೆ ಇರುವುದು ಒಳ್ಳೆಯದು. ಏಕೆಂದರೆ 1 ಕಪ್ ಬೇಯಿಸಿದ ಬೇಳೆಯಲ್ಲಿ ಕೇವಲ 168 ಕ್ಯಾಲೋರಿಗಳು ಮಾತ್ರ ಸಿಗುತ್ತವೆ ಎಂದು ಹೇಳಬಹುದು

ವಿಟಮಿನ್ ಅಂಶಗಳು ಹೇರಳವಾಗಿವೆ–ಕೆಂಪು ಬೇಳೆಗಳಲ್ಲಿ ಫೋಲೆಟ್ ಮತ್ತು ವಿಟಮಿನ್ ‘ ಬಿ ‘ ಅಂಶ ಸಾಕಷ್ಟಿದೆ. ಹಾಗಾಗಿ ಇದೊಂದು ವಿಟಮಿನ್ ಅಂಶದ ಪೂರಕ ಆಹಾರ ಎಂದು ಹೇಳಬಹುದು. ಕೆಂಪು ಬೇಳೆ ಕಾಳುಗಳ ಸೇವನೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಅವುಗಳಲ್ಲಿ ಕೆಲವೊಂದನ್ನು ನೋಡುವುದಾದರೆ,ನಾರಿನ ಅಂಶ ಮೆಗ್ನೀಷಿಯಂ ಮತ್ತು ಫೋಲೇಟ್ ಅಂಶ ಅತ್ಯಧಿಕವಾಗಿದೆ–ಒಬ್ಬ ಆರೋಗ್ಯವಂತ ವ್ಯಕ್ತಿಯ ಹೃದಯವನ್ನು ಆರೋಗ್ಯವಾಗಿ ಕಾಪಾಡಲು ಈ ಅಂಶಗಳಿಗಿಂತ ಬೇರೆ ಬೇಕಿಲ್ಲ ಎನಿಸುತ್ತದೆ.

ಕೆಂಪು ಬೇಳೆ ಕಾಳುಗಳನ್ನು ಸೇವನೆ ಮಾಡುವುದರಿಂದ ಅದರಲ್ಲಿರುವ ಮೆಗ್ನೀಷಿಯಂ ಅಂಶ ದೇಹದ ರಕ್ತ ಸಂಚಾರವನ್ನು ಅಭಿವೃದ್ಧಿ ಪಡಿಸಿ ದೇಹದ ಎಲ್ಲಾ ಅಂಗಾಂಗಗಳಿಗೆ ಆಮ್ಲಜನಕ ಮತ್ತು ಪೋಷಕ ಸತ್ವಗಳನ್ನು ತಲುಪುವಂತೆ ಮಾಡುತ್ತದೆ.

ಹೃದಯದ ಅಪಧಮನಿಗಳ ಹಾನಿ ಉಂಟಾಗುವುದನ್ನು ತಪ್ಪಿಸಿ, ಹೃದಯಕ್ಕೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತದೆ. ಕೆಂಪು ಬೇಳೆ ಕಾಳುಗಳಲ್ಲಿ ಕಂಡು ಬರುವ ಅಧಿಕ ಪ್ರಮಾಣದ ನಾರಿನ ಅಂಶ ದೇಹದಲ್ಲಿ ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟಗಳನ್ನು ನಿರ್ವಹಣೆ ಮಾಡುತ್ತದೆ ಎಂದು ಹೇಳಬಹುದು.

ದೇಹದ ತೂಕ ನಿರ್ವಹಣೆ ಇನ್ನು ಮುಂದೆ ಸಾಧ್ಯ-ಮೊದಲೇ ಹೇಳಿದಂತೆ ಕೆಂಪು ಬೇಳೆ ಕಾಳುಗಳಲ್ಲಿ ಕಡಿಮೆ ಪ್ರಮಾಣದ ಕ್ಯಾಲೊರಿ ಅಂಶಗಳು ಇರುವುದರಿಂದ ಮತ್ತು ಅತಿ ಹೆಚ್ಚಿನ ಪ್ರಮಾಣದ ನಾರಿನ ಅಂಶ ಮತ್ತು ಪ್ರೋಟಿನ್ ಅಂಶ ನಿಮ್ಮ ದೇಹ ಸೇರುವುದರಿಂದ ಬಹಳ ಬೇಗನೆ ನಮಗೆ ಹೊಟ್ಟೆ ಹಸಿವಾಗುವಿಕೆ ನಿವಾರಣೆ ಆಗುತ್ತದೆ.

ಇದರಿಂದ ಬೇರೆ ಬಗೆಯ ಅನಾರೋಗ್ಯಕರ ಆಹಾರಗಳನ್ನು ಆಗಾಗ ಸೇವನೆ ಮಾಡಬೇಕು ಎನ್ನುವ ನಿಮ್ಮ ಬಯಕೆ ಇಲ್ಲವಾಗುತ್ತದೆ. ಇದರ ಜೊತೆಗೆ ನಿಮ್ಮ ದೇಹದಲ್ಲಿ ಈಗಾಗಲೇ ಶೇಖರಣೆ ಆಗಿರುವ ಬೊಜ್ಜಿನ ಅಂಶ ನಿಮ್ಮ ದೇಹದ ಪ್ರತಿ ದಿನದ ಕಾರ್ಯ ಚಟುವಟಿಕೆಗೆ ನೆರವಾಗುತ್ತದೆ.

ರೋಗ – ನಿರೋಧಕ ಶಕ್ತಿ ಬಲಗೊಳ್ಳುತ್ತದೆ–ಕೆಂಪು ಬೇಳೆ ಕಾಳುಗಳಲ್ಲಿ ಕೇವಲ ವಿಟಮಿನ್ ಅಂಶ ಮತ್ತು ಖನಿಜಾಂಶಗಳು ಮಾತ್ರ ಇರುವುದಲ್ಲದೆ ಹೆಚ್ಚಿನ ಪ್ರಮಾಣದ ಆಂಟಿ – ಆಕ್ಸಿಡೆಂಟ್ ಅಂಶಗಳು ಕೂಡ ಲಭ್ಯವಿವೆ.ಆಂಟಿ – ಆಕ್ಸಿಡೆಂಟ್ ಅಂಶಗಳು ನಿಮ್ಮ ದೇಹದ ಫ್ರೀ – ರಾಡಿಕಲ್ ಅಂಶಗಳನ್ನು ನಾಶ ಪಡಿಸಿ ಆರೋಗ್ಯಕರ ಜೀವ ಕೋಶಗಳಿಗೆ ಮತ್ತು ಅಂಗಾಂಶಗಳಿಗೆ ಯಾವುದೇ ಹಾನಿ ಆಗದಂತೆ ನೋಡಿಕೊಳ್ಳುವುದರ ಮೂಲಕ ತ್ವಚೆಯ ಸೌಂದರ್ಯದ ಜೊತೆಗೆ ಕಾಂತಿಯನ್ನು ಹೆಚ್ಚಿಸುತ್ತದೆ.

ಆರೋಗ್ಯಕರ ಗರ್ಭಾವಸ್ಥೆಯನ್ನು ಬೆಂಬಲಿಸುತ್ತದೆ–ವಿಶೇಷವಾಗಿ ಗರ್ಭಿಣಿ ಮಹಿಳೆಯರು ತಮ್ಮ ಆಹಾರ ಪದ್ಧತಿಯಲ್ಲಿ ಕೆಂಪು ಬೇಳೆ ಕಾಳುಗಳನ್ನು ಸೇರಿಸಿ ಸೇವನೆ ಮಾಡುವುದರಿಂದ ಸ್ತ್ರೀ ರೋಗ ತಜ್ಞರ ಆಣತಿಯ ಮೇರೆಗೆ ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದ ಫೋಲೆಟ್ ಅಂಶ ಲಭ್ಯವಾಗುತ್ತದೆ.ಇದರಿಂದ ಗರ್ಭ ಕೋಶದಲ್ಲಿ ಬೆಳವಣಿಗೆ ಆಗುತ್ತಿರುವ ಮಗುವಿನ ಮೆದುಳಿನ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಮತ್ತು ಹುಟ್ಟುವ ಮಗು ಯಾವುದೇ ನೂನ್ಯತೆಗಳನ್ನು ಒಳಗೊಂಡಿರುವುದಿಲ್ಲ ಎಂದು ಹೇಳುತ್ತಾರೆ.

ಮಧುಮೇಹ ನಿವಾರಣೆಯಾಗುತ್ತದೆ–ಇದಕ್ಕೆ ಕಾರಣ ಕೆಂಪು ಬೇಳೆ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ನಾರಿನ ಅಂಶ ಕಂಡು ಬರುವುದು. ಯಾವುದೇ ಆಹಾರದಲ್ಲಿ ನಾರಿನ ಅಂಶ ಹೆಚ್ಚಿದ್ದರೆ ಮತ್ತು ಅಂತಹ ಆಹಾರವನ್ನು ಸೇವಿಸಿದರೆ ನಮ್ಮ ದೇಹದಲ್ಲಿ ರಕ್ತದ ಸಕ್ಕರೆ ಪ್ರಮಾಣ ಹೆಚ್ಚಾಗುವುದಿಲ್ಲ ಎಂದು ಹೇಳುತ್ತಾರೆ. ಮಧುಮೇಹಿಗಳಿಗೆ ಸದಾ ಇಂತಹ ಆಹಾರವೇ ಸೂಕ್ತ ಎಂದು ತಿಳಿದು ಬಂದಿದೆ.

ದೇಹದ ಶಕ್ತಿ ಮತ್ತು ಸದೃಢತೆ ಹೆಚ್ಚಾಗುತ್ತದೆ–ಕೆಂಪು ಬೇಳೆ ಕಾಳುಗಳು ಕಾರ್ಬೋಹೈಡ್ರೇಟ್ ಅಂಶಗಳನ್ನು ನಮ್ಮ ದೇಹದಲ್ಲಿ ನಿಧಾನವಾಗಿ ಕರಗಿಸುವುದರಿಂದ ಅಗತ್ಯವಾಗಿ ನಮ್ಮ ದೇಹಕ್ಕೆ ಬೇಕಾದ ಶಕ್ತಿ ನಿಧಾನವಾಗಿ ನಮಗೆ ಸಿಗುತ್ತಾ ಹೋಗುತ್ತದೆಅದು ಅಲ್ಲದೆ ಕೆಂಪು ಬೆಳೆ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣದ ಅಂಶ ಇರುವುದರಿಂದ ನಮ್ಮ ರಕ್ತ ಸಂಚಾರದಲ್ಲಿ ಆಮ್ಲಜನಕವನ್ನು ನಮ್ಮ ದೇಹದ ಎಲ್ಲಾ ಭಾಗಗಳಿಗೆ ಕೊಂಡೊಯ್ದು ಶಕ್ತಿಯ ಉತ್ಪತ್ತಿಯಲ್ಲಿ ನೆರವಾಗುತ್ತದೆ. ಕಬ್ಬಿಣದ ಅಂಶದ ಕೊರತೆ ಹೊಂದಿರುವವರು ಸಾಮಾನ್ಯವಾಗಿ ಹೆಚ್ಚು ಆಯಾಸ ಮತ್ತು ಸುಸ್ತನ್ನು ಅನುಭವಿಸುತ್ತಿರುತ್ತಾರೆ.

ಇದನ್ನು ಅನಿಮಿಯ ಎಂದು ಕರೆಯುತ್ತಾರೆ. ಗರ್ಭಿಣಿ ಮಹಿಳೆಯರು ಸಹ ಸಾಕಷ್ಟು ಕಬ್ಬಿಣದ ಅಂಶದ ಕೊರತೆ ಕೆಲವೊಮ್ಮೆ ಹೊಂದಿರುವ ಕಾರಣ ಹುಟ್ಟುವ ಮಕ್ಕಳಲ್ಲೂ ಕೂಡ ಇದೇ ಸಮಸ್ಯೆ ಕಾಣುತ್ತದೆ. ಹಾಗಾಗಿ ಕೇವಲ ಕೆಂಪು ಬೇಳೆ ಕಾಳುಗಳನ್ನು ಮಾತ್ರವಲ್ಲದೆ ಗರ್ಭಿಣಿ ಮಹಿಳೆಯರು ತಮ್ಮ ದೇಹಕ್ಕೆ ಅಗತ್ಯವಾದ ಪೌಷ್ಟಿಕ ಸತ್ವಗಳನ್ನು ಒದಗಿಸುವಂತಹ ಆಹಾರಗಳನ್ನು ಸೇವನೆ ಮಾಡಲು ಮುಂದಾಗಬೇಕು.

Strong bone Treatment

https://youtu.be/BNHWGX6aRC8

Related Post

Leave a Comment