ಸಕ್ಕರೆ ಕಾಯಿಲೆ ಇರೋರು ಎಳನೀರು ಕುಡಿದ್ರೆ ಏನಾಗುತ್ತೆ ಈ ಮಾಹಿತಿ ನಿಮಗಾಗಿ!

0 794

ಎಳನೀರಿನಲ್ಲಿ ಇತರ ಪಾನೀಯಗಳಂತೆ ಯಾವುದೇ ಕೃತಕ ಅಂಶ ಇರುವುದಿಲ್ಲ. ಇದೊಂದು ಅಪ್ಪಟ ನೈಸರ್ಗಿಕ ಉತ್ಪನ್ನ. ಭೂಮಿಯ ಮಡಿಲಲ್ಲಿ ಅಂತರ್ಜಲದ ಜಲವನ್ನು ಹೀರಿಕೊಂಡು ನಿಸರ್ಗದ ಮಡಿಲಲ್ಲಿ ಸೊಂಪಾಗಿ ಬೆಳೆದ ತೆಂಗಿನ ಮರ ನಮಗಾಗಿ ನೀಡುವ ಒಂದು ಅತ್ಯದ್ಭುತ ರುಚಿಕರವಾದ ನೈಸರ್ಗಿಕ ದ್ರವಾಹಾರ ಪದಾರ್ಥ,ಇಲ್ಲವೆಂದರೆ ತೆಂಗಿನ ಮರಗಳಿಗೆ ರೋಗ ಎದುರಾಗಿ ಅವುಗಳ ಸಂತತಿ ಕಡಿಮೆಯಾಗಿರಬಹುದು. ಈ ಕಾರಣದಿಂದ ಎಳನೀರಿನ ಬೆಲೆಯೂ ಕೂಡ ಎಂದು ಹೆಚ್ಚಾಗಿ ಕೂತಿದೆ.ಆದರೂ ಜನರಿಗೆ ಯಾವುದೇ ತೊಂದರೆ ಆಗಬಾರದು ಎಂದು ಬಹಳಷ್ಟು ಸೂಪರ್ ಮಾರ್ಕೆಟ್ ಗಳು ಜೊತೆಗೆ ಆನ್ಲೈನ್ ಜಾಲತಾಣಗಳು ಬಾಟಲಿಡ್ ಕೊಕೊನಟ್ ವಾಟರ್ ಅನ್ನು ಮಾರಾಟ ಮಾಡುತ್ತಿವೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಹಾಗಾದರೆ ಜನರ ಆರೋಗ್ಯದ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿ ಎಳನೀರನ್ನು ಈ ರೀತಿ ಮಾರುವ ಅವಶ್ಯಕತೆ ಆದರೂ ಏನಿದೆ ಎನ್ನುವ ಒಂದು ಚಿಕ್ಕ ಸಂದೇಹ ನಿಮ್ಮ ಮನಸ್ಸಿನಲ್ಲಿ ಮೊಳಕೆಯೊಡೆದರೆ ಎಳನೀರಿನಿಂದ ಮನುಷ್ಯನ ಆರೋಗ್ಯಕ್ಕೆ ಉಂಟಾಗುವ ಉಪಯೋಗದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

ಬಿಸಿಲಿಗೂ ಎಳನೀರಿಗೂ ಹೀಗೊಂದು ನಂಟು–ಮಟಮಟ ಮಧ್ಯಾಹ್ನದ ಬಿಸಿಲಿನಲ್ಲಿ ಸುಡುವ ಸೂರ್ಯನ ಕೆಂಗಣ್ಣಿಗೆ ಗುರಿಯಾಗಿ ಮೈತುಂಬಾ ಬೆವರಿನ ಸ್ನಾನ ಮಾಡಿ ಬಳಲಿ ಬೆಂಡಾಗಿ ಹೋಗಿರುವ ನಮ್ಮ ದೇಹಕ್ಕೆ ತಕ್ಷಣವೇ ನೀರಿನ ಅಂಶದ ಅವಶ್ಯಕತೆ ಇರುತ್ತದೆ.ಇತರ ಪಾನೀಯಗಳಿಗೆ ಹೋಲಿಸಿದರೆ ನೀರಿನಲ್ಲಿ ಯಾವುದೇ ಪೋಷಕಾಂಶಗಳು ಇಲ್ಲದೆ ಇದ್ದರೂ ನಮ್ಮ ದೇಹಕ್ಕೆ ಸ್ವಲ್ಪ ಮಟ್ಟಿಗೆ ಆರಾಮ ಎನಿಸುತ್ತದೆ.ಇನ್ನು ಇಂತಹ ಸಮಯದಲ್ಲಿ ವಿಪರೀತ ಸುಸ್ತಿನಿಂದ ಬಳಲುತ್ತಿರುವ ನಮ್ಮ ದೇಹಕ್ಕೆ ಪೋಷಕಾಂಶ ಗಳನ್ನು ಹೊಂದಿದ ಯಾವುದಾದರೂ ಪಾನೀಯ ದೊರೆತರೆ? ಹೌದು. ಇದು ಪ್ರತಿಯೊಬ್ಬರು ಬಯಸುವ ಎಳನೀರಿನಲ್ಲಿ ಸಾಧ್ಯ.

ಎಳನೀರಿನಲ್ಲಿ ಇತರ ಪಾನೀಯಗಳಂತೆ ಯಾವುದೇ ಕೃತಕ ಅಂಶ ಇರುವುದಿಲ್ಲ. ಇದೊಂದು ಅಪ್ಪಟ ನೈಸರ್ಗಿಕ ಉತ್ಪನ್ನ. ಭೂಮಿಯ ಮಡಿಲಲ್ಲಿ ಅಂತರ್ಜಲದ ಜಲವನ್ನು ಹೀರಿ ಕೊಂಡು ನಿಸರ್ಗದ ಮಡಿಲಲ್ಲಿ ಸೊಂಪಾಗಿ ಬೆಳೆದ ತೆಂಗಿನ ಮರ ನಮಗಾಗಿ ನೀಡುವ ಒಂದು ಅತ್ಯದ್ಭುತ ರುಚಿಕರವಾದ ನೈಸರ್ಗಿಕ ದ್ರವಾಹಾರ ಪದಾರ್ಥ.

ಎಳನೀರಿನ ಆರೋಗ್ಯ ಪ್ರಯೋಜನಗಳು–ಎಳನೀರನ್ನು ಅಮೃತಕ್ಕೆ ಹೋಲಿಸಲಾಗಿದೆ. ಯಾರು ತಾನೇ ಎಳನೀರು ಬೇಡ ಎನ್ನುತ್ತಾರೆ ನೀವೇ ಹೇಳಿ? ಶೀತದಿಂದ ಬಳಲುತ್ತಿರುವವರನ್ನು ಬಿಟ್ಟು ಪುಟ್ಟ ಮಕ್ಕಳಿಂದ ಗರ್ಭಿಣಿಯರನ್ನು ಸೇರಿ ವಯಸ್ಸಾದ ಅಜ್ಜ – ಅಜ್ಜಿಯರವರೆಗೆ ಯಾರು ಬೇಕಾದರೂ ಎಳನೀರು ಕುಡಿಯಬಹುದು. ಕೇವಲ ದೇಹಕ್ಕೆ ತಾಜಾತನ ಒದಗಿಸುವುದರ ಜೊತೆಗೆ ಆರೋಗ್ಯವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತಹ ಶಕ್ತಿ ಎಳನೀರಿಗೆ ಇದೆ.

ವ್ಯಾಯಾಮ, ಸ್ಪೋರ್ಟ್ಸ್ ಚಟುವಟಿಕೆಗಳಲ್ಲಿ ಇದ್ದವರಿಗೆ–ಇನ್ನೂ ವ್ಯಾಯಾಮ ಮಾಡುವವರಿಗೆ, ಸ್ಪೋರ್ಟ್ಸ್ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ ಎಳನೀರು ಹೇಳಿ ಮಾಡಿಸಿದ ಒಂದು ಉತ್ತಮ ಪಾನೀಯ.ಮನುಷ್ಯ ಸಾಮಾನ್ಯವಾಗಿ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಿದ ನಂತರ ಆತನ ದೇಹದಲ್ಲಿ ರಕ್ತದ ಒತ್ತಡ ಏರುಪೇರಾಗುವುದು ಸಹಜ. ಅಂತಹ ಸಮಯದಲ್ಲಿ ಎಳನೀರಿನ ಸೇವನೆಯಿಂದ ದೇಹದಲ್ಲಿ ರಕ್ತದ ಒತ್ತಡ ನಿಯಂತ್ರಣ ಆಗುವುದರ ಜೊತೆಗೆ ದೇಹಕ್ಕೆ ಅಗತ್ಯವಾಗಿ ಬೇಕಾದ ಸೋಡಿಯಂ ಮತ್ತು ಪೊಟ್ಯಾಷಿಯಂ ಎಂಬ 2 ಎಲೆಕ್ಟ್ರೋಲೈಟ್ ಗಳು ದೇಹ ಸೇರುತ್ತವೆ.

ಆಹಾರ ತಜ್ಞರ ಪ್ರಕಾರ–ಕೆಲವು ಆಹಾರ ತಜ್ಞರ ಅಭಿಪ್ರಾಯದ ಮೇರೆಗೆ ಎಳನೀರು ತನ್ನ ನೈಸರ್ಗಿಕ ಎಲೆಕ್ಟ್ರೋಲೈಟ್ ಗಳನ್ನು ನಮ್ಮ ದೇಹಕ್ಕೆ ಕೊಡುವುದರ ಜೊತೆಗೆ ಮೆಟಬಾಲಿಕ್ ಪ್ರಕ್ರಿಯೆಯನ್ನು ಉತ್ತಮಗೊಳಿಸಿ ಪಿ ಹೆಚ್ ಸಮತೋಲನವನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ.ಎಳನೀರಿನಲ್ಲಿರುವ ಹೇರಳವಾದ ಮೆಗ್ನೀಷಿಯಂ ಅಂಶ ದೇಹಕ್ಕೆ ಪುಷ್ಟಿ ಮತ್ತು ಶಕ್ತಿಯನ್ನು ಕೊಟ್ಟು ನರನಾಡಿಗಳನ್ನು ಶಾಂತವಾಗಿಸುತ್ತದೆ.

ಇನ್ನು ಪೊಟಾಸಿಯಂ ಅಂಶ ನಮ್ಮ ಮೂತ್ರ ಪಿಂಡಗಳ ಕಾರ್ಯ ಚಟುವಟಿಕೆಯನ್ನು ಸರಾಗಗೊಳಿಸಿ, ಮಾಂಸಖಂಡಗಳಿಗೆ ಬಲವನ್ನು ತುಂಬಿ ಯಾವುದೇ ಸಮಯದಲ್ಲಿ ಎದುರಾಗಬಹುದಾದ ಪಾರ್ಶ್ವವಾಯುವಿನ ಸಮಸ್ಯೆಯನ್ನು ಆರಂಭದಲ್ಲೇ ನಿಯಂತ್ರಣ ಮಾಡುತ್ತದೆ.ಇದರ ಜೊತೆಗೆ ಎಳನೀರಿನಲ್ಲಿ ರಕ್ತದ ಪ್ಲಾಸ್ಮಾ ಅಂಶದಂತೆ ಹಲವಾರು ಅಂಶಗಳು ಲಭ್ಯವಿದ್ದು, ವೈದ್ಯರು ಎಳನೀರನ್ನು ಅಪಧಮನಿ ದ್ರವವಾಗಿ ಸಹ ಬಳಕೆ ಮಾಡುತ್ತಾರೆ.

ಮಧುಮೇಹಿಗಳಿಗೆ ಎಳನೀರಿನ ನಂಟು ಒಳ್ಳೆಯದೇ?ಎಳನೀರಿನಿಂದ ನಮ್ಮ ದೇಹಕ್ಕೆ ಉಂಟಾಗುವ ಹಲವಾರು ಆರೋಗ್ಯ ಪ್ರಯೋಜನಗಳನ್ನು ಇದುವರೆಗೂ ನೋಡಿದ್ದೇವೆ. ಆದರೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು ಮಧುಮೇಹ ಇಲ್ಲದವರಿಗೆ ಸೂಕ್ತ.ಹಾಗಾದರೆ ಮಧುಮೇಹ ಇರುವವರು ಎಳನೀರು ಕುಡಿಯಲೇಬಾರದೇ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವವಾಗುತ್ತದೆ. ರುಚಿಕರವಾದ ಸಿಹಿ ಎಳನೀರಿನಲ್ಲಿ ಪೌಷ್ಟಿಕ ಸತ್ವಗಳ ಜೊತೆಗೆ ಸಕ್ಕರೆ ಅಂಶ ಕೂಡ ಇದೆ ಎಂಬುದು ನೆನಪಿರಲಿ.

ಮಧುಮೇಹ ಹೊಂದಿದ ಜನರು ಕಡ್ಡಾಯವಾಗಿ ಪ್ರತಿ ದಿನ ವ್ಯಾಯಾಮ ಮಾಡಿ ಒಂದು ಎಳನೀರು ಕುಡಿಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಬಹಳ ಸ್ಪಷ್ಟವಾಗಿ ಇಲ್ಲಿ ಒಂದು ಅಂಶವನ್ನು ಅರ್ಥ ಮಾಡಿಕೊಳ್ಳಬೇಕು.

ಮಧುಮೇಹಿಗಳು ವ್ಯಾಯಾಮ ಮಾಡದೇ ಹೋದರೆ ತಮ್ಮ ದೇಹದಲ್ಲಿನ ಸಕ್ಕರೆ ಅಂಶ ಕರಗದೇ ಹಾಗೆ ಉಳಿದು ಎಳನೀರಿನ ಸೇವನೆಯಿಂದ ಇದು ಇನ್ನಷ್ಟು ಹೆಚ್ಚಾಗಿ ಕೊನೆಗೆ ಮಧುಮೇಹ ನಿಯಂತ್ರಣಕ್ಕೆ ಬಾರದೆ ಹೋಗುವ ಸಂಭವವಿರುತ್ತದೆ. ಈಗಾಗಲೇ ಮಧುಮೇಹ ನಿಯಂತ್ರಣ ಇಲ್ಲದೆ ಜೀವನ ಸಾಗಿಸುತ್ತಿರುವ ಮಧುಮೇಹಿಗಳು ಎಳನೀರನ್ನು ಕುಡಿಯಬಾರದು.

ತಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿ ಹೊಂದಿದ ಜನರು ಪ್ರತಿ ದಿನ 1 ಎಳನೀರನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ, ಅಥವಾ ಮಧ್ಯಾಹ್ನದ ಒಳಗಾಗಿ ವ್ಯಾಯಾಮದ ನಂತರ ಕುಡಿದರೆ ದೇಹಕ್ಕೆ ಒಳ್ಳೆಯದು.ಕೆಲವು ಜನರಲ್ಲಿ ಹೆಚ್ಚಾಗಿ ಎಳನೀರು ಕುಡಿಯುವುದರಿಂದ ಹೊಟ್ಟೆ ಉಬ್ಬಿದಂತಾಗಿ ಗ್ಯಾಸ್ಟಿಕ್ ಸಮಸ್ಯೆ ಕಂಡು ಬರುತ್ತದೆ. ಜೊತೆಗೆ ಎಳನೀರು ದೇಹಕ್ಕೆ ಬಹಳಷ್ಟು ತಂಪು ಎಂದು ಎಲ್ಲರೂ ಹೇಳುತ್ತಾರೆ. ಆದ್ದರಿಂದ ವಿಪರೀತ ಎಳನೀರಿನ ಸೇವನೆ ದೇಹಕ್ಕೆ ಶೀತದ ವಾತಾವರಣವನ್ನು ನಿರ್ಮಾಣ ಮಾಡಿ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡುವಂತೆ ಪ್ರೇರೇಪಿಸುತ್ತದೆ.

ಯಾವ ಎಳನೀರು ಆರೋಗ್ಯಕ್ಕೆ ಸೂಕ್ತ?–ನಾವು ನೀವು ಗಮನಿಸಿರುವ ಹಾಗೆ ಎಳನೀರು ಮಾರುವವನ ಹತ್ತಿರ ಎರಡು ಬಣ್ಣದ ಎಳನೀರು ಕಂಡು ಬರುತ್ತವೆ. ಹಸಿರು ಬಣ್ಣದ ಮತ್ತು ಕೆಂಬಣ್ಣದ ಎಳನೀರು.ಸಾಮಾನ್ಯವಾಗಿ ಚೆನ್ನಾಗಿ ಬಲಿತ ಎಳನೀರ ಕುಡಿಯಬೇಕು ಎಂದು ನಮ್ಮ ಆಯ್ಕೆ ಸದಾ ಕೆಂಬಣ್ಣದ ಎಳನೀರೇ ಆಗಿರುತ್ತದೆ. ಆದರೆ ಮಧುಮೇಹಿಗಳಿಗೆ ಹಸಿರು ಬಣ್ಣದ ಎಳನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಏಕೆಂದರೆ ಕೆಂಬಣ್ಣದ ಎಳನೀರಿನಲ್ಲಿ ಗ್ಲುಕೋಸ್ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಅದೇ ಹಸಿರು ಬಣ್ಣದ ಎಳನೀರಿನಲ್ಲಿ ಸಕ್ಕರೆ ಅಂಶ ಕಡಿಮೆ ಇದ್ದು, ಕುಡಿಯಲು ರುಚಿಕರವಾಗಿರುವುದರ ಜೊತೆಗೆ ಮಧುಮೇಹಿಗಳಲ್ಲಿ ಮೆಟಬಾಲಿಕ್ ಪ್ರಕ್ರಿಯೆಯನ್ನು ಉತ್ತಮಗೊಳಿಸಿ ಅವರ ದೇಹದ ಸಕ್ಕರೆ ಮಟ್ಟಗಳನ್ನು ಸರಿಪಡಿಸಲು ಕೇವಲ 200 ಎಂ ಎಲ್ ಎಳನೀರು ಸಾಕಾಗುತ್ತದೆ.

ಇನ್ನು ಎಲ್ಲಿ ತಮ್ಮ ಮಧುಮೇಹದ ಮಟ್ಟ ಹೆಚ್ಚಾಗಿ ಬಿಡುವುದೋ ಎಂಬ ಅನುಮಾನ ಹೊಂದಿದವರು ಎಳನೀರಿನ ಸೇವನೆಯ ಜೊತೆಗೆ ಸ್ವಲ್ಪ ದ್ವಿದಳ ಧಾನ್ಯಗಳು ಅಥವಾ ಬಾದಾಮಿ, ವಾಲ್ನಟ್, ಗೋಡಂಬಿ ಬೀಜಗಳನ್ನು ಸೇವಿಸಬಹುದು. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಎಳನೀರು ನಾವು ಬೇಸಿಗೆ ಕಾಲದಲ್ಲಿ ಸಹಜವಾಗಿ ಸೇವಿಸುವ ಐಸ್ ಕ್ರೀಮ್, ಸಾಫ್ಟ್ ಡ್ರಿಂಕ್ಸ್ ಮತ್ತು ಇತರ ಹಣ್ಣಿನ ರಸಗಳಿಗೆ ಹೋಲಿಸಿದರೆ ಸಾವಿರ ಪಾಲು ಮೇಲು ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ.ಏಕೆಂದರೆ ಎಳನೀರಿನಲ್ಲಿ ಯಾರು ಕೂಡ ಬೇಕೆಂದು ಸಕ್ಕರೆ ಅಥವಾ ಕೃತಕ ಬಣ್ಣಗಳನ್ನು ಹಾಕಿರುವುದಿಲ್ಲ. ಇದು ನಿಸರ್ಗ ನಮಗಾಗಿ ಕೊಟ್ಟ ವರದಾನ

Leave A Reply

Your email address will not be published.