ಶರೀರದ ಈ ಅಂಗಕ್ಕೆ ಇಂದೇ ಕಟ್ಟಿರಿ ಕಪ್ಪು ದಾರ ಎಲ್ಲಾ ನಿಮ್ಮ ಕಾಲು ಕೆಳಗೆ ಇರ್ತಾರೆ!

0 2,996

ಪ್ರಪಂಚದ ಅನೇಕ ಧರ್ಮಗಳಲ್ಲಿ, ಸಮುದಾಯಗಳಲ್ಲಿ ಶುಭ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಪ್ಪು ಬಣ್ಣವನ್ನು ಧರಿಸುವುದು ಅಥವಾ ಕಪ್ಪು ಬಣ್ಣದ ವಸ್ತುಗಳನ್ನು ಇಡುವುದನ್ನು ಕೂಡ ನಿಷೇಧಿಸಲಾಗಿದೆ. ಕಪ್ಪು ಬಣ್ಣವು ನಕಾರಾತ್ಮಕತೆಯನ್ನು ಸೃಷ್ಟಿಸುತ್ತದೆ ಎನ್ನುವ ನಂಬಿಕೆಯಿಂದ ಕಪ್ಪು ಬಣ್ಣವನ್ನು ಹೆಚ್ಚಾಗಿ ಬಳಸಲಾಗುವುದಿಲ್ಲ. ಹಿಂದೂ ಧರ್ಮದಲ್ಲೂ ಕೂಡ ಧಾರ್ಮಿಕ ಚಟುವಟಿಕೆಗಳ ಸಂದರ್ಭಗಳಲ್ಲಿ ಕಪ್ಪು ಬಣ್ಣದ ಬಟ್ಟೆಯನ್ನಾಗಲಿ, ಕಪ್ಪು ಬಣ್ಣದ ವಸ್ತುಗಳನ್ನಾಗಲಿ ಬಳಸುವುದಿಲ್ಲ. ಆದರೆ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಕಂಪು ಬಣ್ಣವು ಬಹಳ ಶ್ರೇಷ್ಟವೆಂದು ಪರಿಗಣಿಸಲಾಗುತ್ತದೆ.

ಕಪ್ಪು ದಾರವನ್ನು ಧರಿಸುವುದರಿಂದ ನಮ್ಮೊಳಗಿನ ನಕಾರಾತ್ಮಕ ಶಕ್ತಿಯನ್ನು ಅಥವಾ ಹೊರಗಿನ ನಕಾರಾತ್ಮಕ ಶಕ್ತಿಯು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ತಡೆಯುತ್ತದೆ ಹಾಗೂ ಎಲ್ಲಾ ರೀತಿಯ ನಿರಾಶವಾದಿ ಭಾವನೆಗಳನ್ನು ಕೂಡ ತೊಡೆದುಹಾಕುತ್ತದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಇಂದಿಗೂ ಕೂಡ ಹೆಚ್ಚಿನವರು ಕಪ್ಪು ದಾರವನ್ನು ಧರಿಸುತ್ತಾರೆ.

ಹಿಂದೂ ಧರ್ಮದಲ್ಲಿ ಕಪ್ಪು ದಾರದ ಮಹತ್ವ–ನಮ್ಮ ಸೊಂಟಕ್ಕಿರಬಹುದು, ಕಾಲಿಗಿರಬಹುದು ಅಥವಾ ದೇಹದ ಇನ್ನಿತರ ಭಾಗಗಳಿಗೆ ಕಪ್ಪು ದಾರವನ್ನು ಸುತ್ತುವುದರಿಂದ ಅಥವಾ ಕಟ್ಟುವುದರಿಂದ ಸಾಕಷ್ಟು ಅನುಕೂಲಗಳಿವೆ. ಜ್ಯೋತಿಷ್ಯ ಗ್ರಂಥಗಳಲ್ಲಿ ಕಪ್ಪು ದಾರದ ಮಹತ್ವವನ್ನು ವಿವರಿಸಲಾಗಿದೆ. ಕಪ್ಪು ದಾರವು ಧಾರ್ಮಿಕ ಹಾಗೂ ಜ್ಯೋತಿಷ್ಯ ದೃಷ್ಟಿಕೋನದಿಂದ ಮಾತ್ರವಲ್ಲ, ವೈಜ್ಞಾನಿಕವಾಗಿಯೂ ಸಾಕಷ್ಟು ಪ್ರಯೋಜನಕಾರಿಯಾಗಿದೆ.

ಕಪ್ಪು ದಾರವು ಮನುಷ್ಯರನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ. ಅಷ್ಟು ಮಾತ್ರವಲ್ಲ, ದುಷ್ಟ ಕಣ್ಣುಗಳಿಂದ ಮತ್ತು ದೃಷ್ಟಿಯಿಂದ ಕಾಪಾಡುತ್ತದೆ. ಕಪ್ಪು ದಾರವನ್ನು ಕಟ್ಟಿಕೊಂಡ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಸಾಧಿಸುವನು. ಕಪ್ಪು ದಾರವನ್ನು ನಮ್ಮ ಇಷ್ಟದಂತೆ ಧರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಕೆಲವೊಂದು ಆಚರಣೆಗಳಿವೆ.

ನೀವು ಕಪ್ಪು ದಾರವನ್ನು ದರಿಸುವ ಮುನ್ನ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ:1) ಕಪ್ಪು ದಾರಗಳಿಗೆ 9 ಗಂಟುಗಳನ್ನು ಕಟ್ಟಿ ನಂತರ ಆ ದಾರವನ್ನು ಧರಿಸಬೇಕು.2) ಕಪ್ಪು ದಾರವನ್ನು ಮಂತ್ರಗಳಿಂದ ಶಕ್ತಿಯುತಗೊಳಿಸಿದ ನಂತರ ಅಭಿಜಿತ್‌ ಅಥವಾ ಬ್ರಹ್ಮ ಮುಹೂರ್ತಗಳಂತಹ ಶುಭ ಮುಹೂರ್ತದಲ್ಲಿ ಧರಿಸಬೇಕು. ಕಪ್ಪು ದಾರವನ್ನು ಧರಿಸುವ ಮುನ್ನ ಜ್ಯೋತಿಷ್ಯರ ಬಳಿ ಕೇಳಿ ದಾರವನ್ನು ಧರಿಸುವುದು ಉತ್ತಮ.

3) ನೀವು ನಿಮ್ಮ ದೇಹದ ಯಾವ ಭಾಗಕ್ಕೆ ಕಪ್ಪು ದಾರವನ್ನು ಸುತ್ತಲು ಇಚ್ಛಿಸುತ್ತೀರೋ ಆ ಭಾಗಕ್ಕೆ 2, 4, 6 ಅಥವಾ 8 ಸುತ್ತುಗಳನ್ನು ದಾರದಿಂದ ಸುತ್ತಬೇಕು.4) ಒಂದು ವೇಳೆ ನೀವು ಕಪ್ಪು ದಾರವನ್ನು ಧರಿಸುವ ಮುನ್ನ ನಿಮ್ಮ ದೇಹದಲ್ಲಿ ಕೆಂಪು ಅಥವಾ ಹಳದಿ ಬಣ್ಣದ ದಾರಗಳಿದ್ದರೆ ನೀವು ಕಪ್ಪು ಬಣ್ಣದ ದಾರವನ್ನು ಧರಿಸಬಾರದು.5) ಶನಿವಾರದಂದು ಕಪ್ಪು ಬಣ್ಣದ ದಾರವನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ.

6) ಕಪ್ಪು ಬಣ್ಣವು ಭಗವಾನ್‌ ಶನಿಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ನೀವು ಗ್ರಹಗಳ ಬಗ್ಗೆ ತಿಳಿದುಕೊಳ್ಳದೇ ಅಥವಾ ಅದರ ಚಲನೆಯ ಬಗ್ಗೆ ತಿಳಿದುಕೊಳ್ಳದೇ ವಿನಃ ಕಾರಣ ಕಪ್ಪು ದಾರವನ್ನು ಧರಿಸಬಾರದು.7) ಕಪ್ಪು ದಾರವನ್ನು ಧರಿಸಿದ ನಂತರ ನಿರ್ದಿಷ್ಟ ಸಮಯದಲ್ಲಿ ನಿಯಮಿತವಾಗಿ ರುದ್ರ ಗಾಯತ್ರಿ ಮಂತ್ರವನ್ನು ಪಠಿಸಿ. ಇಲ್ಲಿದೆ ನೋಡಿ ರುದ್ರ ಗಾಯತ್ರಿ ಮಂತ್ರ:ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್ ||

8) ನಿಮ್ಮ ಮನೆಯ ಮೇಲೆ ಬೀಳಬಹುದಾದ ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ನಿಮ್ಮ ಮನೆಯ ಮುಂದೆ ನಿಂಬೆಯೊಂದಿಗೆ ಕಪ್ಪು ದಾರವನ್ನು ಕಟ್ಟಬೇಕು.9) ಭಗವಾನ್‌ ಹನುಮಂತನಿಂದ ಆಶೀರ್ವಾದವನ್ನು ಪಡೆದುಕೊಂಡ ನಂತರ ( ಹನುಮಂತನ ದೇವಾಲಯಕ್ಕೆ ಹೋಗಿ ಕಪ್ಪು ದಾರವನ್ನು ಪೂಜಿಸಿದ ನಂತರ) ಕಪ್ಪು ದಾರವನ್ನು ಧರಿಸಿದರೆ ವ್ಯಕ್ತಿಯ ಕಾಯಿಲೆಗಳನ್ನು ಮತ್ತು ರೋಗಗಳನ್ನು ನಿಯಂತ್ರಿಸುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಕಪ್ಪು ದಾರವನ್ನು ಧರಿಸಬೇಕು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ತಮ್ಮ ಅಂದಕ್ಕಾಗಿ ಕಪ್ಪು ಬಣ್ಣವನ್ನು ಧರಿಸುತ್ತಾರೆ. ಕಪ್ಪು ಬಣ್ಣದ ದಾರವನ್ನು ಧರಿಸುವುದು ತಪ್ಪಲ್ಲ. ಆದರೆ ಅದರ ಮಹತ್ವವನ್ನು ತಿಳಿಯದೇ, ಜ್ಯೋತಿಷ್ಯರ ಸಲಹೆಯಿಲ್ಲದೆ ಕಪ್ಪು ದಾರವನ್ನು ಧರಿಸುವುದು ಸೂಕ್ತವಲ್ಲ. ಕಪ್ಪು ದಾರವನ್ನು ಧರಿಸುವುದರಿಂದ ಜೀವನದಲ್ಲಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

Leave A Reply

Your email address will not be published.