ಕಬ್ಬಿಣಾಂಶ ಕೊರತೆ ನಿರ್ಲಕ್ಯ ಮಾಡಲೇಬೇಡಿ!

Don’t ignore iron deficiency :ದೇಹದಲ್ಲಿ ಕಬ್ಬಿಣಾಂಶವು ಕಡಿಮೆಯಾದರೆ ಅದರಿಂದ ನಾನಾ ಬಗೆಯ ಸಮಸ್ಯೆಗಳು ಕಾಡಲು ಆರಂಭವಾಗುವುದು. ದೇಹದಲ್ಲಿನ ಕೆಂಪು ರಕ್ತ ಕಣಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಹಾಗೂ ಎಲ್ಲಾ ಭಾಗಗಳಿಗೆ ಆಮ್ಲಜನಕವು ಪೂರೈಕೆ ಮಾಡುವಂತಹ ಹಿಮೋಗ್ಲೋಬಿನ್ ಮಟ್ಟವು ಸರಿಯಾಗಿರಬೇಕಾದರೆ ಆಗ ದೇಹದಲ್ಲಿ ಕಬ್ಬಿಣಾಂಶವು ಉತ್ತಮವಾಗಿ ಇರಲೇಬೇಕು.

ಕಬ್ಬಿಣಾಂಶದ ಕೊರತೆ ಇದ್ದರೆ ಅದನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ. ಇದು ಮಕ್ಕಳಲ್ಲಿ ದೇಹದ ಬೆಳವಣಿಗೆ ಅಥವಾ ನಿಧಾನಗತಿಯ ಬೆಳವಣೆಗೆಗೆ ಕಾರಣ. ಕಬ್ಬಿಣಾಂಶವು ಉತ್ತಮ ಪ್ರಮಾಣದಲ್ಲಿ ಇರುವಂತಹ ಆಹಾರಗಳನ್ನು ನಿತ್ಯವೂ ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿಕೊಂಡರೆ ಖಂಡಿತವಾಗಿಯೂ ಅದರಿಂದ ರಕ್ತದ ಮಟ್ಟವನ್ನು ವೃದ್ಧಿಸಬಹುದು. ಅಂತಹ ಕೆಲವು ಆಹಾರಗಳು ಯಾವುದು ಎಂದು ನೀವು ಸ್ಕ್ರೋಲ್ ಡೌನ್ ಮಾಡುತ್ತಾ ಓದಬಹುದು.

​ಕಡಲೆಕಾಳು
ವಿವಿಧ ರೀತಿಯ ತರಕಾರಿ ಪದಾರ್ಥಗಳು ಹಾಗೂ ತಿಂಡಿಗಳಲ್ಲಿ ಕೂಡ ಕಡಲೆಕಾಳನ್ನು ಬಳಕೆ ಮಾಡಲಾಗುತ್ತದೆ. ಇದು ಕಬ್ಬಿಣಾಂಶದ ಕೊರತೆ ನೀಗಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ಇದನ್ನು ಸೇವನೆ ಮಾಡಿದರೆ ಆಗ ದೇಹದಲ್ಲಿನ ಕಬ್ಬಿಣಾಂಶವನ್ನು ಆರೋಗ್ಯವಾಡಿಬಹುದು.

​ಮೊಟ್ಟೆ

ಮೊಟ್ಟೆಯನ್ನು ನಾವು ವಿವಿಧ ರೀತಿಯ ಖಾದ್ಯಗಳಲ್ಲಿ ಬಳಕೆ ಮಾಡುತ್ತೇವೆ. ಕಬ್ಬಿಣಾಂಶದ ಕೊರತೆಯಿಂದ ಬಳಲುತ್ತಲಿದ್ದರೆ ಆಗ ನೀವು ಮೊಟ್ಟೆ ಸೇವನೆ ಮಾಡಿ. ಮೊಟ್ಟೆಯು ನೈಸರ್ಗಿಕವಾಗಿ ಕಬ್ಬಿಣಾಂಶ, ವಿಟಮಿನ್ ಮತ್ತು ಪ್ರೋಟೀನ್ ಅಮಶವನ್ನು ಹೊಂದಿದ್ದು, 100 ಗ್ರಾಂ ಮೊಟ್ಟೆಯಲ್ಲಿ ದಿನದ ಅಗತ್ಯಕ್ಕೆ ಬೇಕಾಗುವ 1.2 ಮಿ.ಗ್ರಾಂ. ಕಬ್ಬಿಣಾಂಶವು ಇದೆ.

​ಬೀಟ್ ರೂಟ್

ಬೀಟ್‌ರೂಟ್‌ನಲ್ಲಿ ವಿವಿಧ ಬಗೆಯ ಪೋಷಕಾಂಶಗಳಾಗಿರುವಂತಹ ಪೊಟಾಶಿಯಂ, ಪೋಸ್ಪರಸ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್-ಪ್ರೋಟೀನ್ ಮತ್ತು ಕಬ್ಬಿಣಾಂಶವು ಇದೆ. ದೇಹದಲ್ಲಿ ಕಬ್ಬಿಣಾಂಶವನ್ನು ವೃದ್ಧಿಸಲು ಬೀಟ್ ರೂಟ್ ತುಂಬಾ ಪರಿಣಾಮಕಾರಿ ಎಂದು ಹೇಳಲಾಗಿದೆ. ಇದರಲ್ಲಿ ವಿಟಮಿನ್ ಸಿ ಅಮಶವಿದ್ದು, ಇದು ಕಬ್ಬಿಣಾಂಶವನ್ನು ಶೇಖರಿಸುವುದು.

​ನೆಲ್ಲಿಕಾಯಿ

ದೇಹಕ್ಕೆ ಕಬ್ಬಿಣಾಂಶವನ್ನು ಒದಗಿಸುವಲ್ಲಿ ನೆಲ್ಲಿಕಾಯಿಯು ತುಂಬಾ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ವಿಟಮಿನ್ ಸಿ ಅಂಶವಿದ್ದು, ಇದು ದೇಹದಲ್ಲಿ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಕಾರಿ. ಒಂದೇ ತಟ್ಟೆಯಲ್ಲಿಟ್ಟು ಇವುಗಳನ್ನು ಸೇವನೆ ಮಾಡಿದರೆ ಅದರಿಂದ ಕಬ್ಬಿಣಾಂಶವು ಬೇಗನೆ ದೇಹಕ್ಕೆ ಲಭ್ಯವಾಗುವುದು.

​ಬಸಳೆ/ಪಾಲಕ್ ಸೊಪ್ಪು

ಹಸಿರೆಲೆ ತರಕಾರಿಗಳು ಆರೋಗ್ಯಕ್ಕೆ ಆರೋಗ್ಯಕಾರಿ ಎನ್ನುವುದು ನಮಗೆ ತಿಳಿದೇ ಇದೆ. ಪಾಲಕ, ಬಸಳೆ ಇತ್ಯಾದಿಗಳನ್ನು ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ಬೇಕಾಗುವ ಕಬ್ಬಿಣಾಂಶವು ಸಿಗುವುದು. ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದನ್ನು ಹೇಳಿದೆ. ಕಬ್ಬಿಣಾಂಶದ ಕೊರತೆ ಇದ್ದರೆ ಆಗ ನೀವು ಪಾಲಕ ಇತ್ಯಾದಿ ಹಸಿರೆಲೆ ತರಕಾರಿಗಳನ್ನು ಸೇರ್ಪಡೆ ಮಾಡಿ.

ಈ ಮೇಲಿನ ಐದು ಆಹಾರಗಳನ್ನು ಆಹಾರ ಕ್ರಮದಲ್ಲಿ ಬಳಕೆ ಮಾಡುವ ಮೂಲಕ ಕಬ್ಬಿಣಾಂಶದ ಕೊರತೆಯನ್ನು ನೀಗಿಸಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment